Wednesday, 30 July 2025

ತ್ರಿವಿಕ್ರಮ ಲಾಕೆಟ್ ಮತ್ತು ಉದಿಯ ಮಹಿಮೆ ಅಪಾರ! - ಚೇತನ್‌ಸಿಂಗ್ ಸಹಾರೆ, ಇಂದೋರ್

 
ತ್ರಿವಿಕ್ರಮ ಲಾಕೆಟ್ ಮತ್ತು ಉದಿಯ ಮಹಿಮೆ ಅಪಾರ! - ಚೇತನ್‌ಸಿಂಗ್ ಸಹಾರೆ, ಇಂದೋರ್

ಒಬ್ಬ ಶ್ರದ್ಧಾವಂತ, ಅನಿರೀಕ್ಷಿತ ಇಚ್ಛೆಯಂತೆ, ತನ್ನ ಮದುವೆಗೆ ಸಿದ್ಧವಾಗಿ ನಿಂತಿದ್ದ ಅಳಿಯನ ಕುತ್ತಿಗೆಗೆ ತ್ರಿವಿಕ್ರಮ ಲಾಕೆಟ್ ಹಾಕುತ್ತಾನೆ. ತದನಂತರ ಆ ಲಾಕೆಟ್ ಮತ್ತು ಉದಿಯ ಪ್ರಭಾವದಿಂದ, ಬಾಪು ಭಕ್ತನಲ್ಲದ ಆತನ ಅಳಿಯ, ಮದುವೆಯ ಸಮಾರಂಭದಲ್ಲಿಯೇ ತನ್ನ ಮೇಲಿದ್ದ ವಿಘ್ನಗಳಿಂದ ಸುಲಭವಾಗಿ ಮುಕ್ತನಾಗುತ್ತಾನೆ!

-----------------------------------

ಎಲ್ಲವೂ ಅತರ್ಕ್ಯ!

ಹರಿ ಓಂ. ನಾನು 8 ಮೇ 2018 ರಂದು ನನಗೆ ಆದ ಸದ್ಗುರು ಶ್ರೀಅನಿರುದ್ಧ ಬಾಪು ಅವರ ಅನುಭವವನ್ನು ಎಲ್ಲರ ಮುಂದೆ ಪ್ರಸ್ತುತಪಡಿಸಲಿದ್ದೇನೆ.

ನನ್ನ ಈ ಅನುಭವದಿಂದ ಬಾಪು ಅವರಿಗೆ ನಮ್ಮ ಬಗ್ಗೆ ಎಷ್ಟು ಕಾಳಜಿ ಇದೆ ಮತ್ತು ಅವರು ತಮ್ಮ ಭಕ್ತರೊಂದಿಗೆ ಕ್ಷಣ ಕ್ಷಣವೂ ಇದ್ದು, ಭಕ್ತರ ಮತ್ತು ಅವರ ಕುಟುಂಬದ ರಕ್ಷಣೆ ಹೇಗೆ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿಯುತ್ತದೆ.

ನನ್ನ ಅಳಿಯನ ಮದುವೆಯಲ್ಲಿ ಭಾಗವಹಿಸಲು ನನ್ನ ಸಹೋದರಿ, ನಾನು ಮತ್ತು ನನ್ನ ಕುಟುಂಬ 6 ಮೇ 2018 ರಂದು ಇಂದೋರ್‌ನಿಂದ ವರ್ಧಾಕ್ಕೆ ಹೊರಟೆವು. ಬಯಸಿದ ಸ್ಥಳಕ್ಕೆ ತಲುಪಿದ ತಕ್ಷಣ ನಾನು ನನ್ನ ಅಳಿಯನನ್ನು ಭೇಟಿಯಾದೆ ಮತ್ತು ಅವನಿಗೆ "ನೀನು ಹೇಗಿದ್ದೀಯಾ?" ಎಂದು ಕೇಳಿದೆ. ಇದನ್ನು ಕೇಳಲು ಒಂದು ಕಾರಣವಿತ್ತು. ನನ್ನ ಅಳಿಯ ಬಹಳಷ್ಟು ಮದ್ಯಪಾನ ಮಾಡುತ್ತಿದ್ದ, ಆದರೆ ಎರಡು ದಿನಗಳಿಂದ ಅವನು ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದನು. ಆದ್ದರಿಂದ ಅವನು ನನಗೆ ಸ್ವಲ್ಪ ಉತ್ತಮವಾಗಿ ಕಾಣಿಸುತ್ತಿದ್ದನು.

ವರ್ಧಾ ತಲುಪಿದ ದಿನದಿಂದ ನನ್ನ ಮನಸ್ಸಿನಲ್ಲಿ ನನ್ನ ಅಳಿಯನ ಬಗ್ಗೆ ಚಿಂತೆ ಇತ್ತು. ನಾನು ಸದಾ ಅವನ ಬಗ್ಗೆಯೇ ಯೋಚಿಸುತ್ತಿದ್ದೆ. ಅವನು ಬಾಪು ಭಕ್ತನಾಗಿರಲಿಲ್ಲ, ಆದರೆ ನನಗೆ ಪದೇ ಪದೇ ಅನಿಸುತ್ತಿತ್ತು, ನಾವು ಅವನಿಗೆ ತ್ರಿವಿಕ್ರಮ ಲಾಕೆಟ್ ಧರಿಸಲು ಕೊಡಬೇಕು ಎಂದು. ನನಗೆ ತಿಳಿಯುವ ಮೊದಲೇ ನಾನು ನನ್ನ ಕುತ್ತಿಗೆಯಲ್ಲಿದ್ದ ತ್ರಿವಿಕ್ರಮ ಲಾಕೆಟ್ ಅನ್ನು ಅಳಿಯನ ಕುತ್ತಿಗೆಗೆ ಹಾಕಿದೆ. ನಿಜವಾಗಿಯೂ ಹೇಳಬೇಕೆಂದರೆ; ನನ್ನ ಲಾಕೆಟ್ ಅನ್ನು ಅವನಿಗೆ ಹೇಗೆ ಕೊಟ್ಟೆ ಎಂದು ನನಗೂ ತಿಳಿಯಲಿಲ್ಲ! ಈ ಕೃತ್ಯವನ್ನು ನಾನು ಮನಃಪೂರ್ವಕವಾಗಿ ಮಾಡಬೇಕೆಂದು ಅನಿಸಿತು ಮತ್ತು ನಾನು ಅದನ್ನು ಮಾಡಿದೆ. ಮದುವೆಯಾಗುವ ತನಕ ಈ ಲಾಕೆಟ್ ಅನ್ನು ಕುತ್ತಿಗೆಯಿಂದ ತೆಗೆಯಬಾರದು ಎಂದು ಅಳಿಯನಿಗೆ ಹೇಳಿದೆ. ಆಶ್ಚರ್ಯಕರ ವಿಷಯವೆಂದರೆ, ಬಾಪು ಭಕ್ತನಾಗಿಲ್ಲದಿದ್ದರೂ ಅಳಿಯನು ಇದನ್ನು ಒಪ್ಪಿಕೊಂಡನು. ನನಗೆ ನಿರಾಳವಾಯಿತು.

ಈ ಘಟನೆಯ ಕೆಲವೇ ಕ್ಷಣಗಳಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಅಳಿಯನಿಗೆ ಏನೋ ಆಗಲು ಶುರುವಾಯಿತು, ಆದರೆ ನಮಗೆಲ್ಲರಿಗೂ ಅದರ ರೋಗನಿರ್ಣಯವಾಗುತ್ತಲೇ ಇರಲಿಲ್ಲ. ನನ್ನ ಅಳಿಯ ಇದ್ದಕ್ಕಿದ್ದಂತೆ ನಡುಗಲು ಶುರುವಾದನು. ನನ್ನ ಹೆಂಡತಿ ಅಳಿಯನಿಗೆ ಶಗುನದ ಮೆಹಂದಿ ಹಚ್ಚುತ್ತಿದ್ದಾಗಂತೂ ಅವನು ತುಂಬಾ ನಡುಗಲು ಶುರುವಾದನು.  ಮಾರನೆಯ ದಿನ  ಮದುವೆ ಮತ್ತು ಇದು ಏನು ನಡೆಯುತ್ತಿದೆ ಎಂದು ತಿಳಿಯುತಿರಲಿಲ್ಲ.  ಯಾರ ಮದುವೆಯೋ, ಅವರ ಆರೋಗ್ಯವೇ ಹದಗೆಡುತ್ತಿತ್ತು. ಏನಾದರೂ ಉಪಾಯ ಮಾಡಲೇಬೇಕಿತ್ತು, ಏಕೆಂದರೆ ಮನೆಯಲ್ಲಿ ಪೂಜೆಯೂ ನಡೆಯುತ್ತಿತ್ತು ಮತ್ತು ಮದುವೆಯ ದಿನ ಅಳಿಯನ ಆರೋಗ್ಯದ ಬಗ್ಗೆ ಯಾವುದೇ ತೊಂದರೆಗಳು ಬೇಡವಾಗಿದ್ದವು. ಆದ್ದರಿಂದ ನಾನು ತಕ್ಷಣವೇ ಅವನನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದೆ.

ಆಸ್ಪತ್ರೆಯ ವೈದ್ಯರು ಅವನ ಸಂಪೂರ್ಣ ಪರೀಕ್ಷೆ ಮಾಡಿದರು. ವೈದ್ಯರು ಅವನನ್ನು ಪರೀಕ್ಷಿಸುತ್ತಿದ್ದಾಗ ನಾವು ಅವನ ಬಳಿ ಕುಳಿತು ಹನುಮಾನ್ ಚಾಲೀಸಾ ಹೇಳುತ್ತಿದ್ದೆವು. ಬಾಪು ಹತ್ತಿರ ಒಂದೇ ಪ್ರಾರ್ಥನೆ ಮಾಡಿದೆವು, 'ಬಾಪು, ಅಳಿಯನನ್ನು ಗುಣಪಡಿಸಿ. ಅವನ ಮದುವೆ ನಾಳೆ ಇದೆ'. ಅವನನ್ನು ಸಂಪೂರ್ಣವಾಗಿ ಪರೀಕ್ಷಿಸಿದ ನಂತರ ವೈದ್ಯರು, "ಇವನಿಗೆ ಏನೂ ಆಗಿಲ್ಲ. ಇವನು ಸಂಪೂರ್ಣವಾಗಿ ಗುಣಮುಖನಾಗಿರುವುದರಿಂದ ನೀವು ಇವನನ್ನು ಮನೆಗೆ ಕರೆದುಕೊಂಡು ಹೋಗಬಹುದು" ಎಂದು ಹೇಳಿದರು. ನಾವು ಸ್ವಲ್ಪ ನಿಶ್ಚಿಂತರಾಗಿ ಮನೆಗೆ ಹಿಂದಿರುಗಿದೆವು. ಆದರೆ ಮನಸ್ಸಿನ ಆತಂಕ ಹೆಚ್ಚುತ್ತಲೇ ಇತ್ತು. ಈಗಂತೂ ಅವನು ಗುಣಮುಖನಾಗಿದ್ದಾನೆ ಎಂದು ತಿಳಿದಿತ್ತು. ಆದರೂ ಮನಸ್ಸಿನ ಆತಂಕ ಕಡಿಮೆಯಾಗಲಿಲ್ಲ. ಅಳಿಯನಿಗೆ ಏನಾದರೂ ಆದರೂ, ತ್ರಿವಿಕ್ರಮ ಲಾಕೆಟ್ ಅವನನ್ನು ಖಂಡಿತವಾಗಿಯೂ ರಕ್ಷಿಸುತ್ತದೆ ಎಂದು ಒಂದು ಮನಸ್ಸು ನನಗೆ ವಿಶ್ವಾಸದಿಂದ ಹೇಳುತ್ತಿತ್ತು. ನನ್ನ ಸಲುವಾಗಿಯಾದರೂ, ಅಳಿಯನು ಯಾವುದೇ ವಿರೋಧವಿಲ್ಲದೆ ಲಾಕೆಟ್ ಅನ್ನು ಕುತ್ತಿಗೆಗೆ ಹಾಕಿಕೊಂಡಿದ್ದನು.

ಈ ಲಾಕೆಟ್ ಯಾರ ಕುತ್ತಿಗೆಯಲ್ಲಿರುತ್ತದೋ, ಅವರನ್ನು ರಕ್ಷಿಸಲು ಬಾಪು ಯಾವಾಗಲೂ ಸಮರ್ಥರಾಗಿದ್ದಾರೆ.

ಬಾಪು ನನ್ನ ಅಳಿಯನೊಂದಿಗೂ ಇದ್ದಾರೆ ಎಂಬುದು ನನ್ನ ವಿಶ್ವಾಸವಾಗಿತ್ತು.

ಮರುದಿನ ಮದುವೆ ಸಮಾರಂಭವು ಯಾವುದೇ ಅಡೆತಡೆಯಿಲ್ಲದೆ ನೆರವೇರಿತು. ಮನೆಗೆ ಹೊರಡಲು ಸಮಯವಾಯಿತು ಮತ್ತು ನವವಧುವಿನ ಬೀಳ್ಕೊಡುಗೆಯ ಸಮಯದಲ್ಲಿ ನನ್ನ ಅಳಿಯ ಇದ್ದಕ್ಕಿದ್ದಂತೆ ಕೆಳಗೆ ಬಿದ್ದನು ಮತ್ತು ಅವನ ಬಾಯಿಯಿಂದ ನೊರೆ ಬರಲು ಶುರುವಾಯಿತು. ಒಂದು ಕಡೆ ಆನಂದದ ಸಮಾರಂಭ, ಮತ್ತು ಯಾರ ಮದುವೆಯೋ ಅವನೇ ಅಚೇತನನಾಗಿ ಬಿದ್ದಿದ್ದನು ಮತ್ತು ಜೊತೆಗೆ ನವವಧು ಮತ್ತು ಅವಳ ತಾಯಿ ಮನೆಯವರು ನಿಂತಿದ್ದರು. ಎಲ್ಲರ ಮುಂದೆ ಒಂದೇ ಪ್ರಶ್ನೆಯಿತ್ತು: ಅವನಿಗೆ ಇದ್ದಕ್ಕಿದ್ದಂತೆ ಏನಾಯಿತು? ಆನಂದಕ್ಕೆ ಕಳಂಕ ತಗುಲಿದಂತೆ ಆಯಿತು. ಯಾರಿಗೂ ಏನೂ ತೋಚಲಿಲ್ಲ, ಏನು ಮಾಡಬೇಕೆಂದು ತಿಳಿಯಲಿಲ್ಲ. ಎಲ್ಲರೂ ಹೆದರಿ ಅಳಲು ಶುರುಮಾಡಿದರು ಮತ್ತು ಅಳಿಯನನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರವನ್ನು ಮನೆಯವರೆಲ್ಲರೂ ತೆಗೆದುಕೊಂಡರು.

ನಾನು ಮತ್ತು ನನ್ನ ಹೆಂಡತಿ ಬಾಪು ಭಕ್ತರಾಗಿರುವುದರಿಂದ, ಬಾಪು, ಬಂದ ಸಂಕಟಕ್ಕೆ ಖಂಡಿತವಾಗಿಯೂ ಸರಿಯಾದ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ನಮಗೆ ಬಾಪು ಅವರ ಮೇಲೆ ಸಂಪೂರ್ಣ ನಂಬಿಕೆ ಇತ್ತು. ನನ್ನ ಹೆಂಡತಿಗೆ ಅವಳು ತಂದಿದ್ದ ಉದಿಯ ನೆನಪಾಯಿತು. ಹೊರಗಡೆ ಹೋಗುವಾಗ, ಅಥವಾ ಮನೆಯಿಂದ ಹೊರಡುವಾಗ ನಾವು ಯಾವಾಗಲೂ ಉದಿಯನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಹಚ್ಚುತ್ತೇವೆ. ನನ್ನ ಸಹೋದರಿಯೂ ಬಾಪುರವರ ಭಕ್ತಲಾಗಿದ್ದರಿಂದ ಅವಳ ಬಳಿಯೂ ಉದಿ ಇತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ತಕ್ಷಣವೇ ಅವನಿಗೆ ಉದಿ ಹಚ್ಚುವುದು ಒಳ್ಳೆಯದು ಎಂಬ ಯೋಚನೆಯಿಂದ ಹೆಂಡತಿಯು ಓಡುತ್ತಾ ಉದಿಯ ಡಬ್ಬಿಯನ್ನು ತೆಗೆದುಕೊಂಡು ಅಳಿಯನ ಹತ್ತಿರ ಹೋದಳು. ನಮ್ಮ ಇತರ ಸಂಬಂಧಿಗಳು ಬಾಪು ಭಕ್ತರಲ್ಲದ ಕಾರಣ ಅವರೆಲ್ಲರೂ ತಕ್ಷಣವೇ ಹೆದರಿ ಹೋಗಿದ್ದರು ಮತ್ತು ಹೆಂಡತಿಯ ಮಾತು ಕೇಳದೆ ಅವಳನ್ನು ಪಕ್ಕಕ್ಕೆ ಸರಿಯಲು ಹೇಳಿದರು. ಆದರೆ ನನ್ನ ಹೆಂಡತಿ ಮಾತ್ರ ಅವರಿಗೆ ದೃಢವಾಗಿ ಹೇಳಿದಳು, "ಇದು ನಮ್ಮ ಸಂಸ್ಥೆಯ ಪವಿತ್ರ ಉದಿ. ಆದ್ದರಿಂದ ನಾನು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ಅದನ್ನು ಹಚ್ಚುತ್ತೇನೆ." ಹೆಂಡತಿಯು ಪ್ರಜ್ಞಾಹೀನನಾಗಿದ್ದ ಅಳಿಯನಿಗೆ ಉದಿ ಹಚ್ಚಿದಳು ಮತ್ತು ಅದನ್ನು ಹಚ್ಚಿದ ತಕ್ಷಣ ಅವನಿಗೆ ಆರಾಮವಾಯಿತು ಮತ್ತು ಅವನು ಪ್ರಜ್ಞೆಗೆ ಬಂದನು. ಅಳಿಯನು ಪ್ರಜ್ಞೆಗೆ ಬಂದ ನಂತರ ನನ್ನ ಸಹೋದರಿ ಅವನಿಗೆ ನೀರಿಗೆ ಉದಿ ಹಾಕಿ, ಉದಿಯ ನೀರನ್ನು ಸಹ ಕೊಟ್ಟಳು. ಅದನ್ನು ತೆಗೆದುಕೊಂಡ ತಕ್ಷಣ ಅಳಿಯನು ಸಂಪೂರ್ಣವಾಗಿ ಗುಣಮುಖನಾಗಿ ಎದ್ದು ಕುಳಿತುಕೊಂಡನು. ಅವನನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವೂ ಇರಲಿಲ್ಲ. ಚಿಕಿತ್ಸೆಯ ನಂತರ ಇಂದು ಅವನು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ.

ಇಂತವನು ನನ್ನ ಬಾಪು. ಭಕ್ತನ ಒಂದು ಕರೆಯನ್ನು ಕೇಳಿದ ತಕ್ಷಣ ಅವರು ಎಲ್ಲಿಯಾದರೂ, ಯಾವಾಗ ಬೇಕಾದರೂ ಮತ್ತು ಹೇಗೆ ಬೇಕಾದರೂ ಧಾವಿಸಿ ಬರುತ್ತಾರೆ. ಅಯ್ಯೋ, ಕರೆದರೆ ಮಾತ್ರವಲ್ಲ, ಕರೆಯದಿದ್ದರೂ ಬಾಪು ನಮ್ಮ ಸಹಾಯಕ್ಕೆ ಬರುತ್ತಾರೆ. ಬಾಪು ಯಾವಾಗಲೂ ನಮ್ಮೊಂದಿಗಿರುವ ಕಾರಣ ಅವರು ಇಂದೋರ್ ಮತ್ತು ವರ್ಧಾದಲ್ಲಿ ನನ್ನೊಂದಿಗಿದ್ದರು. ಅಳಿಯನ ಕುತ್ತಿಗೆಗೆ ತ್ರಿವಿಕ್ರಮ ಲಾಕೆಟ್ ನನ್ನಿಂದ ಹಾಕಲ್ಪಟ್ಟಿತು, ಅದು ಕೂಡ ಬಾಪು ಅವರೇ ಅವನ ಮೇಲೆ ಮತ್ತು ನನ್ನ ಮೇಲಿನ ಅಕಾರಣ ಕರುಣೆಯಿಂದ. ಆ ತ್ರಿವಿಕ್ರಮ ಲಾಕೆಟ್ ಮತ್ತು ಉದಿಯು ಅಳಿಯನನ್ನು ರಕ್ಷಿಸಿತು ಮತ್ತು ಮುಂದಿನ ಪ್ರಸಂಗ ತಪ್ಪಿತು, ಇದನ್ನು ನಾನು ವಿಶ್ವಾಸದಿಂದ ಹೇಳುತ್ತೇನೆ. ಅವನು ಬಾಪು ಅವರನ್ನು ನಂಬದಿದ್ದರೂ, ಬಾಪು ಅವನನ್ನು ರಕ್ಷಿಸಿದರು. ಅವನು ಬಾಪು ಭಕ್ತನಲ್ಲದಿದ್ದರೂ, ನನ್ನ ಸಹೋದರಿ (ಅವನ ತಾಯಿ) ಬಾಪು ಅವರ ಉಪಾಸನೆಗೆ ಹೋಗುತ್ತಾಳೆ ಮತ್ತು ಮನೆಯಲ್ಲಿಯೂ ಬಾಪು ಅವರ ನಿತ್ಯ ಉಪಾಸನೆ ಮತ್ತು ಪಠಣ ಮಾಡುತ್ತಾಳೆ. ಈಗಂತೂ ಅವಳ ಸೊಸೆಯೂ ಸದ್ಗುರು ಬಾಪು ಅವರ ಉಪಾಸನೆಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಬಾಪು ಭಕ್ತಿಯಲ್ಲಿ ಸ್ಥಿರವಾಗಿದ್ದಾಳೆ.

ಹರಿ ಒಮ್ ಶ್ರೀರಾಮ್ ಅಮ್ಬದ್ನ್ಯ


ગુજરાતી>> తెలుగు>> বাংলা>> தமிழ்>>

Tuesday, 29 July 2025

ವೈದಿಕ ಗಣಪತಿ

 

ವೈದಿಕ ಗಣಪತಿ - ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಅಗ್ರಲೇಖನ (15-12-2006)

"ಋಗ್ವೇದದಲ್ಲಿರುವ 'ಬ್ರಹ್ಮಣಸ್ಪತಿ-ಸೂಕ್ತ' ಮತ್ತು ಅಥರ್ವವೇದದಲ್ಲಿ 'ಗಣಪತಿ-ಅಥರ್ವಶೀರ್ಷ' ಎಂಬ ಹೆಸರಿನಿಂದ ಗುರುತಿಸಲ್ಪಡುವ ಉಪನಿಷತ್ತು - ಈ ಎರಡು ಸಮರ್ಥ ಉಲ್ಲೇಖಗಳಿಂದ ಶ್ರೀ ಗಣೇಶನ ವೈದಿಕ ಅಸ್ತಿತ್ವವು ಸಾಬೀತಾಗುತ್ತದೆ.

ಋಗ್ವೇದದಲ್ಲಿರುವ ಈ ಮೂಲ ಮಂತ್ರವು ಹೀಗಿದೆ:

ಓಂ ಗಣಾನಾಂ ತ್ವಾಂ ಗಣಪತಿಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಮ್‌ |

ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಃ ಸೀದ ಸಾದನಮ್‌ ||

ಋಗ್ವೇದ 2/23/1

ಭಾವಾರ್ಥ: ಸಮುದಾಯದ ಪ್ರಭುವಾಗಿ ನೀನು ಗಣಪತಿ, ಎಲ್ಲಾ ಜ್ಞಾನಿಗಳಲ್ಲಿ ನೀನು ಶ್ರೇಷ್ಠ, ಎಲ್ಲಾ ಕೀರ್ತಿವಂತರಲ್ಲಿ ನೀನು ಅತ್ಯುನ್ನತ ಮತ್ತು ನೀನೇ ಎಲ್ಲಾ ಸತ್ತಾಧಿಗಳ ಅಧಿಪತಿ. ನಿನ್ನನ್ನು ನಾವು ಅತ್ಯಂತ ಆದರದಿಂದ ಆಹ್ವಾನಿಸುತ್ತಿದ್ದೇವೆ, ನೀನು ನಿನ್ನ ಎಲ್ಲಾ ಸಾಮರ್ಥ್ಯಗಳೊಂದಿಗೆ ಬಂದು ಈ ಆಸನದ ಮೇಲೆ (ಮೂಲಾಧಾರ ಚಕ್ರದಲ್ಲಿ) ವಿರಾಜಮಾನನಾಗು. (ಮೂಲಾಧಾರ ಚಕ್ರದ ಆಸನದ ಮೇಲೆ ನಿನ್ನ ಅಧಿಕಾರ ಮಾತ್ರ ನಡೆಯಲಿ.)

ಶ್ರೀ ಬ್ರಹ್ಮಣಸ್ಪತಿ ಪೂಜೆಯ ವೇಳೆ ಸದ್ಗುರು ಶ್ರೀ ಅನಿರುದ್ಧ ಬಾಪು।
ಶ್ರೀ ಬ್ರಹ್ಮಣಸ್ಪತಿ ಪೂಜೆಯ ವೇಳೆ ಸದ್ಗುರು ಶ್ರೀ ಅನಿರುದ್ಧ ಬಾಪು।

ಬ್ರಹ್ಮಣಸ್ಪತಿ ಈ ವೈದಿಕ ದೇವತೆಯ ಒಂದು ಹೆಸರು ಗಣಪತಿ, ಅಂದರೆ ಗಣಪತಿಯದೇ ಒಂದು ಹೆಸರು ಬ್ರಹ್ಮಣಸ್ಪತಿ. ವೈದಿಕ ಕಾಲದಲ್ಲಿ ಪ್ರತಿಯೊಂದು ಶುಭ ಕಾರ್ಯವೂ ಬ್ರಹ್ಮಣಸ್ಪತಿಯ ಆಹ್ವಾನದಿಂದಲೇ ಪ್ರಾರಂಭವಾಗುತ್ತಿತ್ತು ಮತ್ತು ಇಂದಿಗೂ ಅದೇ ಮಂತ್ರದಿಂದ ಗಣಪತಿಯನ್ನು ಆಹ್ವಾನಿಸಿ ಪವಿತ್ರ ಕಾರ್ಯಗಳನ್ನು ಆರಂಭಿಸಲಾಗುತ್ತದೆ. ಋಗ್ವೇದದಲ್ಲಿನ ಬ್ರಹ್ಮಣಸ್ಪತಿ ಜ್ಞಾನದಾತ ಮತ್ತು ಶ್ರೇಷ್ಠ ಜ್ಞಾನಿ, ಗಣಪತಿ ಜ್ಞಾನ ಮತ್ತು ಬುದ್ಧಿ ನೀಡುವ ದೇವರು ಆಗಿರುವಂತೆಯೇ. ಬ್ರಹ್ಮಣಸ್ಪತಿಯ ಕೈಯಲ್ಲಿದ್ದ ಸುವರ್ಣದ ಪರಶು ಇಂದಿಗೂ ಗಣಪತಿಯ ಕೈಯಲ್ಲಿದೆ. ಭಾರತದ ಪ್ರಾಚೀನ ಇತಿಹಾಸದಲ್ಲಿ 'ಸಮನ್ವಯ'ವು ಪ್ರಧಾನ ತತ್ವವಾಗಿದ್ದರಿಂದ ಅನೇಕ ದೇವತೆಗಳು ಆಧ್ಯಾತ್ಮಿಕ ಮಟ್ಟದಲ್ಲಿ ಒಂದಾಗುತ್ತಾ ಹೋದವು. 'ವೇದಗಳಲ್ಲಿನ ಎಲ್ಲವೂ ಬ್ರಹ್ಮ' ಎಂಬ ತತ್ವದಿಂದ ಮತ್ತು 'ಏಕಂ ಸತ್ ವಿಪ್ರಾ ಬಹುಧಾ ವದಂತಿ' (ಆ ಮೂಲ ಅಸ್ತಿತ್ವ (ಪರಮೇಶ್ವರ) ಒಬ್ಬನೇ; ಜ್ಞಾನಿಗಳು ಅವನನ್ನು ಅನೇಕ ಹೆಸರುಗಳಿಂದ ತಿಳಿದಿದ್ದಾರೆ ಅಥವಾ ಆಹ್ವಾನಿಸುತ್ತಾರೆ.) ಈ ಸಂಕಲ್ಪದಿಂದ ಅನೇಕ ಮೂರ್ತಿಗಳು ಮತ್ತು ಅನೇಕ ರೂಪಗಳಿದ್ದರೂ, ಭಾರತೀಯ ಸಂಸ್ಕೃತಿಯಲ್ಲಿ ಪ್ರಾಯೋಗಿಕ ಮಟ್ಟದಲ್ಲಿ ವಿವಿಧ ಪಂಥಗಳಿಂದ ಪೂಜಿಸಲ್ಪಡುವ ದೇವತೆಗಳ ಏಕತ್ವವನ್ನು ಸಾಬೀತುಪಡಿಸಲು ಎಂದಿಗೂ ಕಷ್ಟವಾಗಲಿಲ್ಲ.

ಭಾರತೀಯ ಸಂಸ್ಕೃತಿಯ ಜನಮಾನಸದಲ್ಲಿ ಪರಮಾತ್ಮನ ವಿವಿಧ ರೂಪಗಳ ಹಿಂದಿರುವ ಏಕತ್ವದ, ಅಂದರೆ ಕೇಶವತ್ವದ ಅರಿವು ತುಂಬಾ ಸಮರ್ಥವಾಗಿ ಮತ್ತು ಆಳವಾಗಿ ಬೇರೂರಿರುವದರಿಂದ ಸಾಮಾನ್ಯ ಸುಶಿಕ್ಷಿತ ಅಥವಾ

ಅನಕ್ಷರಸ್ಥ ಸಮಾಜಕ್ಕೂ, 'ಗಣಪತಿ ಆರ್ಯರ ದೇವರು, ವೈದಿಕರ ದೇವರು, ಸಣ್ಣ ಸಣ್ಣ ಬುಡಕಟ್ಟುಗಳ ದೇವರು ಅಥವಾ ವೇದಗಳಲ್ಲಿ ಅಸ್ತಿತ್ವವಿಲ್ಲದ ಮತ್ತು ಪುರಾಣಗಳಿಂದ ಹುಟ್ಟಿದ ದೇವರು' ಎನ್ನುವಂತಹ ವಿವಾದಗಳಿಗೆ ಯಾವುದೇ ಅರ್ಥವಿಲ್ಲ. ಈ ವಿವಾದಗಳು ಕೇವಲ ಕೆಲವು ಇತಿಹಾಸದ ಪ್ರಾಮಾಣಿಕ ಅಧ್ಯಯನಕಾರರಿಗೆ ಅಥವಾ ನಾಸ್ತಿಕ ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರಿಗೆ ಮಾತ್ರ.. ನಿಜವಾದ ಮತ್ತು ಪ್ರಾಮಾಣಿಕ ಇತಿಹಾಸ ಸಂಶೋಧಕರು ತಮ್ಮ ಯಾವುದೇ ದೈವತ ವಿಷಯಕ (ದೇವತೆಗೆ ಸಂಬಂಧಿಸಿದ) ಸಂಶೋಧನೆಯನ್ನು ಸಂಸ್ಕೃತಿಯ ಇತಿಹಾಸಕ್ಕೆ ಮಾರ್ಗದರ್ಶಿ ಸ್ತಂಭಗಳಾಗಿ ಮಾತ್ರ ಬಳಸುತ್ತಾರೆ, ಆದರೆ ಕೆಟ್ಟ ಮನಸ್ಸಿನಿಂದ ಅಂತಹ ಸಂಶೋಧನೆ ಮಾಡುವವರು ಸಮಾಜದಲ್ಲಿ ಬಿರುಕು ಮೂಡಿಸಲು ಅಂತಹ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಾರೆ. ಆದರೆ, ಯಾವುದೇ ಮಾರ್ಗದಿಂದ ಮತ್ತು ಯಾರಿಂದಲೇ ದೈವತ ವಿಷಯಕ ಸಂಶೋಧನೆ ಮಾಡಿದರೂ ಅಥವಾ ತಮ್ಮ ಸ್ವಂತ ಅಭಿಪ್ರಾಯದಂತೆ ದೈವತ ವಿಷಯಕ ವಿಚಾರಗಳನ್ನು ಮಂಡಿಸಿದರೂ, ಆ ದೈವತದ ಆಧ್ಯಾತ್ಮಿಕ ಅಸ್ತಿತ್ವಕ್ಕೆ ಎಂದಿಗೂ ಅಪಾಯ ಎದುರಾಗುವುದಿಲ್ಲ.

ಸದ್ಗುರು ಶ್ರೀ ಅನಿರುದ್ಧ ಬಾಪು ಬ್ರಹ್ಮಣಸ್ಪತಿಗೆ ದುರ್ವಾ ಅರ್ಪಿಸುತ್ತಾ ಅರ್ಚನೆ ನಡೆಸುತ್ತಿರುವ ಸಂದರ್ಭ.
ಸದ್ಗುರು ಶ್ರೀ ಅನಿರುದ್ಧ ಬಾಪು ಬ್ರಹ್ಮಣಸ್ಪತಿಗೆ ದುರ್ವಾ ಅರ್ಪಿಸುತ್ತಾ ಅರ್ಚನೆ ನಡೆಸುತ್ತಿರುವ ಸಂದರ್ಭ.

 ಗಣಪತಿಯನ್ನು ಯಾರ ದೇವರು ಎಂದು ನಿರ್ಧರಿಸಿದರೂ ಸಹ, 'ವಿಶ್ವದ ಘನಪ್ರಾಣ' ಎಂಬ ಗಣಪತಿಯ ಮೂಲ ಸ್ವರೂಪವು ಬದಲಾಗುವುದಿಲ್ಲ ಅಥವಾ ಎಂದಿಗೂ ಕಣ್ಮರೆಯಾಗುವುದಿಲ್ಲ, ಏಕೆಂದರೆ ಗಣಪತಿಯು ಯಾವುದೇ ಸಂಶೋಧಕರ ಸಂಶೋಧನೆಗಳಿಂದ ಸ್ಥಾಪಿತವಾಗಿ ಪ್ರಸಿದ್ಧನಾಗಿಲ್ಲ; ಬದಲಿಗೆ, ಗಣಪತಿ ಎಂಬ ದೇವತೆಯು ಭಕ್ತಿ ಮತ್ತು ಜ್ಞಾನದ ಸಮನ್ವಯವನ್ನು ಸಾಧಿಸಿದ ಋಷಿಗಳ ಚಿಂತನೆಯ ಮೂಲಕ ತನ್ನ ಮೂಲ ರೂಪದಲ್ಲಿ ಪ್ರಕಟವಾಯಿತು, ಭಕ್ತರ ಹೃದಯದಲ್ಲಿ ಪ್ರೀತಿಯಿಂದ ಸ್ಥಾಪಿತವಾಯಿತು ಮತ್ತು ಉಪಾಸಕ ಹಾಗೂ ಉಪಾಸ್ಯರ ಪರಸ್ಪರ ಪ್ರೀತಿಯಿಂದ

ಪ್ರಸಿದ್ಧವಾಯಿತು. ಆದ್ದರಿಂದ, ಋಗ್ವೇದದಲ್ಲಿನ ಬ್ರಹ್ಮಣಸ್ಪತಿ ಸಂಪೂರ್ಣವಾಗಿ ಬೇರೆ ಯಾರೋ ಆಗಿದ್ದರು ಮತ್ತು ಅವರನ್ನು ಕೇವಲ ಗಣಪತಿ ಎಂದು ಕರೆಯಲಾಗುತ್ತಿತ್ತು ಎಂಬ ತರ್ಕಕ್ಕೆ ಭಕ್ತ ಹೃದಯಕ್ಕೆ ಯಾವುದೇ ಸಂಬಂಧವಿಲ್ಲ. ಶಿವ ಮತ್ತು ಪಾರ್ವತಿಯ ಪುತ್ರನಾದ ಈ ಗಣಪತಿ, ಅದಕ್ಕಾಗಿಯೇ ಎಲ್ಲಾ ಉಪಾಸಕರ ಮತ್ತು ಪಂಥಗಳ ಶುಭ ಕಾರ್ಯಗಳಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಾನೆ. ಶೈವ, ದೇವಿ-ಉಪಾಸಕರು, ವೈಷ್ಣವರು, ಸೂರ್ಯೋಪಾಸಕರು ಮುಂತಾದ ವಿವಿಧ ಸಂಪ್ರದಾಯಗಳಲ್ಲಿಯೂ ಗಣಪತಿ ಒಂದು ಸುಂದರ ಸೇತುವನ್ನು ನಿರ್ಮಿಸುತ್ತಾನೆ.

ಅಥರ್ವವೇದದಲ್ಲಿನ ಶ್ರೀ ಗಣಪತಿ-ಅಥರ್ವಶೀರ್ಷವು ಇಂದಿಗೂ ಪ್ರಚಲಿತ ಮತ್ತು ಸರ್ವಮಾನ್ಯವಾಗಿರುವ ಗಣಪತಿಯ ರೂಪ, ಆಯುಧಗಳು ಮತ್ತು ಸ್ವಭಾವ ವಿಶೇಷಗಳನ್ನು ಅತ್ಯಂತ ಸ್ಪಷ್ಟ ಪದಗಳಲ್ಲಿ ವಿವರಿಸುತ್ತದೆ. ಈ ಅಥರ್ವಶೀರ್ಷದಲ್ಲಿಯೂ ಈ ಗಣಪತಿಯನ್ನು ಸ್ಪಷ್ಟವಾಗಿ 'ನೀನು ರುದ್ರ, ವಿಷ್ಣು, ಅಗ್ನಿ, ಇಂದ್ರ, ಚಂದ್ರ, ಸೂರ್ಯ, ವರುಣ - ಎಲ್ಲವೂ ನೀನೇ' ಎಂದು ಸ್ಪಷ್ಟವಾಗಿ ಉಚ್ಚರಿಸಲಾಗಿದೆ. ಹಾಗಾದರೆ, ಈ ಎಲ್ಲಾ ರೂಪಗಳ ಐತಿಹಾಸಿಕ ಸಂದರ್ಭಗಳನ್ನು ಗಣಪತಿಯ ಐತಿಹಾಸಿಕ ಸಂದರ್ಭಗಳೊಂದಿಗೆ ಹೋಲಿಸಿ ನೋಡುವುದು ಏನು ಪ್ರಯೋಜನ? ಅಂತಹ ಸಂಶೋಧನೆಗಳು ಯಾರ ಸಮಯ ಸಾಗುತ್ತಿಲ್ಲ (ಕಳೆಯುತ್ತಿಲ್ಲ) ಅವರ ನಿರರ್ಥಕ ಮತ್ತು ಪೊಳ್ಳು ಮಾತುಗಳಾಗಿವೆ ಮತ್ತು ಅವು ಸಂಸ್ಕೃತಿಯ ಸಂರಕ್ಷಣೆಗೆ ಒಂದು ಕಾಸಿನಷ್ಟು ಸಹ ಪ್ರಯೋಜನಕಾರಿಯಲ್ಲ.

ಬ್ರಹ್ಮಣಸ್ಪತಿಯ ವಿಗ್ರಹಕ್ಕೆ ಅಭಿಷೇಕ ನಡೆಯುತ್ತಿದೆ।
ಬ್ರಹ್ಮಣಸ್ಪತಿಯ ವಿಗ್ರಹಕ್ಕೆ ಅಭಿಷೇಕ ನಡೆಯುತ್ತಿದೆ।

ಜ್ಞಾನಮಾರ್ಗದಲ್ಲಿ ಅವರ ಶ್ರೇಷ್ಠತೆ ವಿವಾದಾತೀತವಾಗಿದೆ, ಆ ಸಂತಶ್ರೇಷ್ಠ ಶ್ರೀ ಜ್ಞಾನೇಶ್ವರ ಮಹಾರಾಜರು ಜ್ಞಾನೇಶ್ವರಿಯ ಆರಂಭದಲ್ಲಿಯೇ -

’ಓಂ ನಮೋ ಜೀ ಆದ್ಯಾ | ವೇದ ಪ್ರತಿಪಾದ್ಯಾ |

ಜಯ ಜಯ ಸ್ವಸಂವೇದ್ಯಾ. ಆತ್ಮರೂಪಾ||

ದೇವಾ ತೂಚಿ ಗಣೇಶು. ಸಕಲಾರ್ಥಮತಿಪ್ರಕಾಶು|.

ಮ್ಹಣೇ ನಿವೃತ್ತಿದಾಸು. ಅವಧಾರಿಜೋ ಜೀ||”

ಎಂದು ಸ್ಪಷ್ಟವಾಗಿ ಶ್ರೀ ಮಹಾಗಣಪತಿ ಬಗ್ಗೆ ಬರೆದಿಟ್ಟಿದ್ದಾರೆ. ಗಣಪತಿ ಮತ್ತು ಬ್ರಹ್ಮಣಸ್ಪತಿ ಒಂದೇ ಅಲ್ಲ ಮತ್ತು ವೇದಗಳಲ್ಲಿ ಗಣಪತಿಯ ಪ್ರತಿಪಾದನೆ ಇಲ್ಲ ಎಂದು ಪರಿಗಣಿಸಿದರೆ, ಶ್ರೀ ಜ್ಞಾನೇಶ್ವರ ಮಹಾರಾಜರ ಈ ವಚನವು ಅದಕ್ಕೆ ಪ್ರಬಲವಾಗಿ ವಿರೋಧವಾಗಿ ನಿಲ್ಲುತ್ತದೆ. ಇತಿಹಾಸದ ಅಧ್ಯಯನ ಮತ್ತು ಸಂಶೋಧನೆಯನ್ನು ಎಷ್ಟೇ ಸಾಧನಗಳ ಮೂಲಕ ಮಾಡಿದರೂ, ಕಾಲದ ಪ್ರಚಂಡ ಬಲಶಾಲಿ ಪ್ರವಾಹದಲ್ಲಿ ಲಭ್ಯವಿರುವ ಸಾಧನಗಳು ಮತ್ತು ಉಲ್ಲೇಖಗಳಿಗಿಂತ ಸಾವಿರಾರು ಪಟ್ಟು ಹೆಚ್ಚಿನ ವಿಷಯಗಳು ನಾಶವಾಗಿರುತ್ತವೆ. ಆದ್ದರಿಂದ, ವಿಶೇಷವಾಗಿ ಸಾಂಸ್ಕೃತಿಕ ಇತಿಹಾಸದ ಸಂಶೋಧನೆ ಮಾಡುವಾಗ ಯಾರೂ ತಮ್ಮ ಅಭಿಪ್ರಾಯವನ್ನು ಏಕೈಕ ಸತ್ಯವೆಂದು ಮಂಡಿಸಲು ಸಾಧ್ಯವಿಲ್ಲ. ಜೀವಂತ ಸಂಸ್ಕೃತಿಯ ಒಂದು ಪ್ರಮುಖ ಲಕ್ಷಣವೆಂದರೆ ಅದರ ಪ್ರವಾಹಿತೆ, ಅಂದರೆ ಸಂಸ್ಕೃತಿಯ ಪ್ರಯಾಣ, ಇದು ಅಕ್ಷರಶಃ ಲಕ್ಷಾಂತರ ಕಾರಣಗಳಿಂದ ಸಂಭವಿಸಿದ ಬದಲಾವಣೆಗಳು. ಈ ಬದಲಾವಣೆಗಳಿಂದ ಸಂಪೂರ್ಣವಾಗಿ ಮತ್ತು ನಿಶ್ಚಲವಾಗಿ ಉಳಿಯುವುದು ಕೇವಲ ಪೂರ್ಣ ಸತ್ಯವೇ, ಮತ್ತು ಸತ್ಯವು ಕೇವಲ ನಿಜವಾದ ವಾಸ್ತವವಲ್ಲ, ಆದರೆ ಸತ್ಯವು ಪಾವಿತ್ರ್ಯವನ್ನು ಉತ್ಪಾದಿಸುವ ವಾಸ್ತವ, ಮತ್ತು ಅಂತಹ ಪವಿತ್ರ ವಾಸ್ತವದಿಂದಲೇ ಆನಂದವು ಉತ್ಪತ್ತಿಯಾಗುತ್ತದೆ ಮತ್ತು ಆದ್ದರಿಂದ ಭಕ್ತ ಹೃದಯದ ಸಂಬಂಧವು ಅಂತಹ 'ಸತ್ಯ'ದೊಂದಿಗೆ ಇರುತ್ತದೆ, ಕೇವಲ ಕಾಗದದ ಮತ್ತು ಸಾಕ್ಷಿಯ ತುಂಡುಗಳೊಂದಿಗೆ ಅಲ್ಲ.

ಬಾಪು ಅವರ ಮಾರ್ಗದರ್ಶನದಂತೆ ಪ್ರತಿವರ್ಷ ಆಚರಿಸಲಾಗುವ ಶ್ರೀ ಮಾಘಿ ಗಣೇಶೋತ್ಸವದಲ್ಲಿ ಸಮೂಹ ಶ್ರೀ ಗಣಪತಿ ಅಥರ್ವಶೀರ್ಷ ಪಠಣ.
ಬಾಪು ಅವರ ಮಾರ್ಗದರ್ಶನದಂತೆ ಪ್ರತಿವರ್ಷ ಆಚರಿಸಲಾಗುವ ಶ್ರೀ ಮಾಘಿ ಗಣೇಶೋತ್ಸವದಲ್ಲಿ ಸಮೂಹ ಶ್ರೀ ಗಣಪತಿ ಅಥರ್ವಶೀರ್ಷ ಪಠಣ.

ಬ್ರಹ್ಮಣಸ್ಪತಿ-ಸೂಕ್ತ ಮತ್ತು ಅಥರ್ವಶೀರ್ಷ ಗಣಪತಿಯ ವೈದಿಕ ಸ್ವರೂಪವನ್ನು ಸಾಬೀತುಪಡಿಸುತ್ತವೆಯೋ ಇಲ್ಲವೋ ಇದರೊಂದಿಗೆ ನನಗೆ ಕಣಮಾತ್ರವೂ ಸಂಬಂಧವಿಲ್ಲ, ಏಕೆಂದರೆ ಸಾವಿರಾರು ವರ್ಷಗಳಿಂದ ಮಾನವ ಸಮಾಜದ ಭಕ್ತಮಾನಸದಲ್ಲಿ ದೃಢವಾಗಿ ಸ್ಥಾಪಿತವಾಗಿರುವ ಮತ್ತು ಅಧಿಷ್ಠಿತವಾಗಿರುವ ಪ್ರತಿಯೊಂದು ರೂಪವು ಆ ಓಂಕಾರದ, ಅಂದರೆ ಪ್ರಣವದ, ಅಂದರೆ ಕೇಶವದ ಸ್ವರೂಪವೇ ಎಂಬುದರ ಬಗ್ಗೆ ನನಗೆ ಎಂದಿಗೂ ಸಂಶಯ ಬಂದಿಲ್ಲ, ಬರುತ್ತಿಲ್ಲ ಮತ್ತು ಬರುವುದಿಲ್ಲ, ಏಕೆಂದರೆ ಕೇಶವ ಎಂದರೆ ಶವದ ಅಥವಾ ಆಕೃತಿಯ ಆಚೆಗಿರುವ ಚೈತನ್ಯದ ಮೂಲ ಮೂಲ. ಅದರ ಅಸ್ತಿತ್ವವನ್ನು ಇಡೀ ಜಗತ್ತು ನಿರಾಕರಿಸಿದರೂ ಸಹ ಅದು ನಾಶವಾಗಲು ಸಾಧ್ಯವಿಲ್ಲ."

ಅಗ್ರಲೇಖದ ಕೊನೆಯಲ್ಲಿ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ:

"ಮಿತ್ರರೇ, ಅನಗತ್ಯವಾದ ಭಾರವಾದ ಚರ್ಚೆಗಳಲ್ಲಿ ತೊಡಗುವುದಕ್ಕಿಂತ, ಸಂಪೂರ್ಣ ಶ್ರದ್ಧೆ ಮತ್ತು ವಿಶ್ವಾಸದಿಂದ ಪರಮಾತ್ಮನನ್ನು ಜಪಿಸಿ. ಶ್ರೀ ಸಮರ್ಥರು ನಿಮ್ಮ ಕಾರ್ಯಗಳನ್ನು ಸಿದ್ಧಿಗೆ ತರಲು ಸಮರ್ಥರಾಗಿದ್ದಾರೆ.

 
ಭಗವಾನ್ ಶ್ರೀ ಬ್ರಹ್ಮಣಸ್ಪತಿಗೆ ಹೂವಿನ ಅರ್ಪಣೆ ಮಾಡುತ್ತಿರುವ ಸದ್ಗುರು ಶ್ರೀ ಅನಿರುದ್ಧ ಬಾಪು।
 

हिंदी >> English >> ગુજરાતી>> తెలుగు>> বাংলা>> தமிழ்>>
ಮಂಗಳಮೂರ್ತಿ  Mangalmurti

ಮಂಗಳಮೂರ್ತಿ

ಭಾಗ - 1

ಮಂಗಲಮೂರ್ತಿ ಮೋರ್ಯಾ! Mangalmurti morya

ಮಂಗಲಮೂರ್ತಿ ಮೋರ್ಯಾ!

ಭಾಗ - 2

ಮೋದ-ಕ  Modak

ಮೋದ-ಕ

ಭಾಗ - 3

ವೈದಿಕ ಗಣಪತಿ Vaidik Ganapati

ವೈದಿಕ ಗಣಪತಿ

ಭಾಗ - 4

ಶ್ರೀಮಹಾಗಣಪತಿ-ದೈವತವಿಜ್ಞಾನ Shree Mahaganapati -Devatavidnyan

ಶ್ರೀಮಹಾಗಣಪತಿ-ದೈವತವಿಜ್ಞಾನ

ಭಾಗ - 5

Monday, 28 July 2025

ಅನಿರುದ್ಧ ಬಾಪೂ ಕೋಟ್ಸ್ಅ - 01- ಅಭ್ಯಾಸ

ಪದವಿ (ಡಿಗ್ರಿ) ನಿಮಗೆ ವಿಷಯದೊಂದಿಗೆ ಜೋಡಿಸುವುದಿಲ್ಲ, ಅಭ್ಯಾಸ ನಿಮಗೆ ವಿಷಯದೊಂದಿಗೆ ಜೊಡಿಸುತ್ತದೆ  - ಸದ್ಗುರು ಅನಿರುದ್ಧ ಬಾಪು

ಪದವಿ (ಡಿಗ್ರಿ) ನಿಮಗೆ ವಿಷಯದೊಂದಿಗೆ ಜೋಡಿಸುವುದಿಲ್ಲ, ಅಭ್ಯಾಸ ನಿಮಗೆ ವಿಷಯದೊಂದಿಗೆ ಜೊಡಿಸುತ್ತದೆ

- ಸದ್ಗುರು ಅನಿರುದ್ಧ ಬಾಪು


ಸದ್ಗುರು ಅನಿರುದ್ಧ ಬಾಪೂ ಅವರ ಸತ್ಯಶಿಕ್ಷಣದ ಬಗ್ಗೆ ಪ್ರೇರಣಾದಾಯಕ ಉಕ್ತಿ – ಅಧ್ಯಯನವು ಹೇಗೆ ಜ್ಞಾನಕ್ಕೆ ನಿಜವಾದ ಸಂಪರ್ಕ ನೀಡುತ್ತದೆ, ಪದವಿಗೆ ಮಾತ್ರವಲ್ಲ.

ಅನಿರುದ್ಧ ಬಾಪೂ ಉದ್ದೀಪನಾಗು ನುಡಿಗಳು, ಸದ್ಗುರು ಅನಿರುದ್ಧ ಬಾಪೂ, ಆತ್ಮಿಕ ಉಲ್ಲೇಖಗಳು