Tuesday, 22 July 2025

ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ 15, 2007)

ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ  15, 2007)
ಮಂಗಲಮೂರ್ತಿ ಮೋರ್ಯಾ! ಸದ್ಗುರು ಶ್ರೀ ಅನಿರುದ್ಧ ಬಾಪು ಅವರ ದೈನಿಕ ಪ್ರತ್ಯಕ್ಷದ ಸಂಪಾದಕೀಯ (ಸಪ್ಟೆಂಬರ  15, 2007)

ನಮ್ಮ ಮನೆಯ ವಾತಾವರಣ ಚಿಕ್ಕಂದಿನಿಂದಲೂ ಸಂಪೂರ್ಣವಾಗಿ ಶುದ್ಧ ವೈದಿಕ ಸಂಸ್ಕಾರಗಳಿಂದ ಕೂಡಿತ್ತು. ಆದರೆ, ತಾರ-ತಮ್ಯ, ಜಾತಿ-ಭೇದ, ಕರ್ಮಠ ಕರ್ಮಕಾಂಡ ಇವುಗಳ ಸುಳಿವೇ ಇರಲಿಲ್ಲ. ಅಮ್ಮ ಮತ್ತು ಅಜ್ಜಿ ಅವರಿಗೆ ಸಂಸ್ಕೃತ ಸಾಹಿತ್ಯದಲ್ಲಿ ಉತ್ತಮ ಜ್ಞಾನವಿತ್ತು, ಎಲ್ಲಾ ಸಂಹಿತೆಗಳು ಅವರಿಗೆ ಕಂಠಪಾಠವಾಗಿದ್ದವು. ಹೀಗಾಗಿ, ವೇದ ಮಂತ್ರಗಳ ಶುದ್ಧ ಮತ್ತು ಲಯಬದ್ಧ ಉಚ್ಚಾರಣೆಗಳು ಸದಾ ನಮ್ಮ ಕಿವಿಗೆ ಬೀಳುತ್ತಿದ್ದವು. ಇಂದಿಗೂ ಅವರ ಧ್ವನಿಯಲ್ಲಿನ ವೈದಿಕ ಮಂತ್ರಗಳು ಮತ್ತು ಸೂಕ್ತಗಳ ಮಧುರ ಸ್ವರಗಳು ನನ್ನ ಹೃದಯದಲ್ಲಿ ಪ್ರತಿಧ್ವನಿಸುತ್ತವೆ. ಗಣಪತಿ ಆರತಿಯ ನಂತರ ಹೇಳಲಾಗುವ ಮಂತ್ರಪುಷ್ಪಾಂಜಲಿ, ಇಂದಿನ ‘ಶಾರ್ಟ್‌ಕಟ್’ ರೀತಿ ‘ಓಂ ಯಜ್ಞೇನ ಯಜ್ಞಮಯಜಂತಾ…’ ದಿಂದ ಪ್ರಾರಂಭವಾಗದೆ, ‘ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ…’ ದಿಂದ ಪ್ರಾರಂಭವಾಗಿ ಸುಮಾರು ಅರ್ಧದಿಂದ ಮುಕ್ಕಾಲು ಗಂಟೆಗಳ ಕಾಲ ನಡೆಯುತ್ತಿತ್ತು. ಅದರಲ್ಲಿನ ಆರೋಹ, ಅವರೋಹ, ಆಘಾತ, ಉದ್ದಾರ ಇತ್ಯಾದಿ ಎಲ್ಲಾ ನಿಯಮಗಳನ್ನು ಪಾಲಿಸಿದರೂ, ಆ ಮಂತ್ರಪುಷ್ಪಾಂಜಲಿಯಲ್ಲಿನ ಮಾಧುರ್ಯ, ಕೋಮಲತೆ ಮತ್ತು ಸಹಜತೆ ಹಾಗೆಯೇ ಜೀವಂತವಾಗಿರುತ್ತಿತ್ತು. ಏಕೆಂದರೆ, ಆ ಮಂತ್ರೋಚ್ಚಾರಣೆಯಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಂಬಲವಿರಲಿಲ್ಲ, ಬದಲಾಗಿ ಸಂಪೂರ್ಣ ಭಕ್ತಿ ರಸದಿಂದ ತುಂಬಿದ ಪ್ರಫುಲ್ಲಿತ ಅಂತಃಕರಣವಿರುತ್ತಿತ್ತು.

ನಂತರ, ನನ್ನ ಐದನೇ ವಯಸ್ಸಿನಲ್ಲಿ, ನನ್ನ ಅಜ್ಜಿಯ ಮನೆಯಲ್ಲಿ ಅಂದರೆ ಪಂಡಿತರ ಮನೆಯ ಗಣಪತಿ ಮುಂದೆ, ಅವರಿಬ್ಬರೂ ನನಗೆ ಮಂತ್ರಪುಷ್ಪಾಂಜಲಿಯ ಶಾಸ್ತ್ರೀಯ ವಿಧಾನವನ್ನು ಮೊದಲ ಬಾರಿಗೆ ಕಲಿಸಿದರು. ಆಗ ನನ್ನ ಅಮ್ಮನ ಮೂವರು ಚಿಕ್ಕಮ್ಮಂದಿರು, ಅಜ್ಜಿ ಮತ್ತು ಅಮ್ಮ ಹೀಗೆ ಐವರು ಸೇರಿ ನನಗೆ ಆರತಿ ಮಾಡಿ, ಸಾಕಷ್ಟು ಮೋದಕಗಳನ್ನು ತಿನ್ನಿಸಿದರು. ಆ ಸಮಯದವರೆಗೆ ನಾನು ನನ್ನ ಅಜ್ಜಿಯ ಮನೆಯಲ್ಲಿ ಏಕೈಕ ಮೊಮ್ಮಗನಾಗಿದ್ದೆ, ಹಾಗಾಗಿ ಸಂಪೂರ್ಣ ಪಾಧ್ಯೆ ಮತ್ತು ಪಂಡಿತ್ ಮನೆತನಗಳಿಗೂ ನಾನು ಅತ್ಯಂತ ಪ್ರೀತಿಯವನಾಗಿದ್ದೆ. ಅದೇ ದಿನ ಅಜ್ಜಿ, ಪಾಧ್ಯೆ ಮನೆತನದ ಸಂಪ್ರದಾಯದ ಪ್ರಕಾರ ಬಾಲಗಣೇಶನನ್ನು ಪ್ರತಿಷ್ಠಾಪಿಸುವ ವಿಧಾನವನ್ನು ನನಗೆ ವಿವರಿಸಿದರು. ಅದಕ್ಕಾಗಿಯೇ ಇಂದಿಗೂ ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸುವ ಮೂರ್ತಿ ಬಾಲಗಣೇಶನದೇ ಆಗಿರುತ್ತದೆ.

ಒಂದು ಬಾರಿ ನಾನು ಅಜ್ಜಿಯನ್ನು ಕೇಳಿದೆ, ‘ಪ್ರತಿ ವರ್ಷ ಬಾಲಗಣೇಶನನ್ನೇ ಯಾಕೆ ಅಜ್ಜಿ?’ ಅಜ್ಜಿ ನನ್ನ ಕೆನ್ನೆಯನ್ನು ಸವರಿಕೊಂಡು ಉತ್ತರಿಸಿದರು, “ಅರೇ ಬಾಪುರಾಯ, ಒಂದು ಮಗು ಮನೆಗೆ ಬಂದಾಗ ನಾವು ಅದನ್ನು ಪ್ರೀತಿಯಿಂದ ನೋಡಿಕೊಂಡರೆ, ಆ ಮಗುವಿನ ಹಿಂದೆಯೇ ಅದರ ತಂದೆ-ತಾಯಿ ಕೂಡ ಬಂದು ಸಂತೋಷಪಡುತ್ತಾರೆ. ಈ ಬಾಲಗಣೇಶನನ್ನು ಭಕ್ತರು ಪ್ರೀತಿಯಿಂದ ನೋಡಿಕೊಳ್ಳುವುದರಿಂದ ಪಾರ್ವತಿ ಮಾತೆ ಮತ್ತು ಪರಮಶಿವನ ಸ್ವಾಗತ ಮತ್ತು ಪೂಜೆ ಸಹ ತನ್ನಿಂದ ತಾನೇ ಆಗುತ್ತದೆ. ಮತ್ತೊಂದು ವಿಷಯ, ಅಪರಿಚಿತ ಸಾಮಾನ್ಯ ಮನುಷ್ಯ ಕೂಡ ಮುದ್ದಾದ ಚಿಕ್ಕ ಮಗುವಿನೊಂದಿಗೆ ವ್ಯವಹರಿಸುವಾಗ ಅವರ ಮನಸ್ಸಿನಲ್ಲಿ ತಾನಾಗಿಯೇ ಒಂದು ನಿಷ್ಕಾಮ ಪ್ರೇಮ ಪ್ರಕಟವಾಗುತ್ತದೆ. ಹಾಗಾದರೆ, ಈ ಅತ್ಯಂತ ಸುಂದರವಾದ ಮಂಗಳಮೂರ್ತಿಯ ಬಾಲರೂಪದ ಸಹವಾಸದಲ್ಲಿ ಭಕ್ತರ ಮನಸ್ಸಿನಲ್ಲಿ ಭಕ್ತಿ, ಪ್ರೇಮ ಹಾಗೂ ನಿಷ್ಕಾಮ ಮತ್ತು ಪವಿತ್ರ ಪ್ರೇಮ ಇರುವುದಲ್ಲವೆ?”


 

ಅಜ್ಜಿಯ ಈ ಭಾವನೆಗಳು ಅತ್ಯಂತ ಶುದ್ಧ ಮತ್ತು ಪವಿತ್ರ ಭಕ್ತಿಯಿಂದ ತುಂಬಿದ ಅಂತಃಕರಣದ ಸಹಜ ಪ್ರವೃತ್ತಿಗಳಾಗಿದ್ದವು. ನಾವೆಲ್ಲರೂ ಅಕ್ಷರಶಃ ಕೋಟ್ಯಂತರ ಜನರು ಗಣಪತಿಯನ್ನು ಮನೆಗೆ ತರುತ್ತೇವೆ, ಕೆಲವರು ಒಂದೂವರೆ ದಿನ, ಇನ್ನು ಕೆಲವರು ಹತ್ತು ದಿನ. ವಿವಿಧ ರೀತಿಯ ಗಣೇಶ ಮೂರ್ತಿಗಳು ಇರಲಿ, ಆದರೆ ಈ ವಿಘ್ನಹರ್ತ ಗಣೇಶನೊಂದಿಗೆ ನಾವು ಇಂತಹ ಆತ್ಮೀಯ ಮತ್ತು ಆಪ್ತವಾದ ಮನೆತನದ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆಯೇ?

ಮನೆಗೆ ಬಂದ ಗಣಪತಿ ಕೇವಲ ಮನೆಯ ಸಂಪ್ರದಾಯವನ್ನು ಮುರಿಯಬಾರದು, ಮುರಿದರೆ ವಿಘ್ನಗಳು ಬರುತ್ತವೆ ಎಂಬ ಭಾವನೆಯಿಂದ ಕೆಲವು ಕಡೆಗಳಲ್ಲಿ ತರಲಾಗುತ್ತದೆ. ಕೆಲವು ಕಡೆಗಳಲ್ಲಿ ಹರಕೆ ತೀರಿಸಲು ತರಲಾಗುತ್ತದೆ, ಇನ್ನು ಕೆಲವು ಕಡೆಗಳಲ್ಲಿ ಕೇವಲ ಉತ್ಸವ ಮತ್ತು ಮೋಜು ಮಸ್ತಿಗಾಗಿ ತರಲಾಗುತ್ತದೆ. ಇಂತಹ ಗಣಪತಿ ಪ್ರತಿಷ್ಠಾಪನೆಯಲ್ಲಿ ಮಂತ್ರಗಳು, ಮಂತ್ರಪುಷ್ಪಾಂಜಲಿ, ಆರತಿ, ಮಹಾನೈವೇದ್ಯ ಇರುತ್ತವೆ. ಜೊತೆಗೆ ರೀತಿ-ರಿವಾಜುಗಳು ಮತ್ತು ಶಾಸ್ತ್ರಗಳನ್ನು ಸಂಪೂರ್ಣವಾಗಿ ಪಾಲಿಸುವ ಭೀತಿಯಿಂದ ಕೂಡಿದ ಪ್ರಯತ್ನವೂ ಇರುತ್ತದೆ. ಆದರೆ, ಈ ಎಲ್ಲ ಗೊಂದಲದಲ್ಲಿ ಕಳೆದುಹೋಗುವುದು ಈ ಆರಾಧನೆಯ ಮೂಲ ಸಾರ ಅಂದರೆ ಪ್ರೀತಿಭರಿತ ಭಕ್ತಿಭಾವ.

ಮಂಗಲಮೂರ್ತಿ ಮೋರ್ಯಾ ಮತ್ತು ಸುಖಕರ್ತಾ ದುಃಖಹರ್ತಾ, ಈ ಶ್ರೀ ಗಣಪತಿಯ ಬಿರುದುಗಳು ಎಲ್ಲರಿಗೂ ತಿಳಿದಿವೆ. ವಾಸ್ತವವಾಗಿ, ಈ ‘ಸುಖಕರ್ತಾ ದುಃಖಹರ್ತಾ’ ಎಂಬ ಬಿರುದಿನಿಂದಲೇ ನಾವು ಗಣಪತಿಯನ್ನು ಮನೆಗೆ ತರಲು ಸಿದ್ಧರಾಗುತ್ತೇವೆ. ಆದರೆ ‘ಮಂಗಲಮೂರ್ತಿ’ ಎಂಬ ಬಿರುದಿನ ಬಗ್ಗೆ ಏನು? ಆ ಸಿದ್ಧಿ ವಿನಾಯಕ ಎಲ್ಲವನ್ನೂ ಮಂಗಳಕರವನ್ನಾಗಿ ಮಾಡುತ್ತಾನೆ. ಆದರೆ, ಅವನನ್ನು ಮನೆಗೆ ತಂದ ನಂತರ ನಾವು ಅವನನ್ನು ಎಷ್ಟು ಮಂಗಳಕರ ವಾತಾವರಣದಲ್ಲಿ ಇಡುತ್ತೇವೆ? ಇದೇ ಮುಖ್ಯ ಪ್ರಶ್ನೆ.

ಕೇವಲ ದೂರ್ವೆಗಳ ದೊಡ್ಡ ಹಾರವನ್ನು ಹಾಕಿ, ಇಪ್ಪತ್ತೊಂದು ಮೋದಕಗಳನ್ನು ಬೆಳಿಗ್ಗೆ ಮತ್ತು ಸಂಜೆ ಅವನ ಮುಂದೆ ಇಟ್ಟು, ಕೆಂಪು ಹೂವುಗಳನ್ನು ಅರ್ಪಿಸಿ ಮತ್ತು ಆರತಿಗಳಿಗೆ ತಾಳಗಳನ್ನು ಕುಟ್ಟಿ, ನಾವು ನಮ್ಮ ಕೈಲಾದಷ್ಟು ಮತ್ತು ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಂಗಳವನ್ನು ಸೃಷ್ಟಿಸುತ್ತೇವೆಯೇ? ಉತ್ತರ ಬಹುತೇಕ ಬಾರಿ ‘ಇಲ್ಲ’ ಎಂದೇ ಸಿಗುತ್ತದೆ.

ಹಾಗಾದರೆ, ಆ ಮಂಗಳಮೂರ್ತಿಗೆ ನಮ್ಮಿಂದ ನಿರೀಕ್ಷಿತವಾಗಿರುವ ‘ಮಾಂಗಲ್ಯ’ವನ್ನು ನಾವು ಹೇಗೆ ಅರ್ಪಿಸಬಹುದು? ಉತ್ತರ ತುಂಬಾ ಸರಳ ಮತ್ತು ಸುಲಭ. ಆ ಮೂರ್ತಿಯನ್ನು ಸ್ವಾಗತಿಸುವಾಗ, ಒಂದು ವರ್ಷದ ನಂತರ ನಮ್ಮ ಆಪ್ತರು ಮನೆಗೆ ಮರಳುತ್ತಿದ್ದಾರೆ ಎಂಬ ಭಾವನೆಯನ್ನು ಇಟ್ಟುಕೊಳ್ಳಿ; ಇಪ್ಪತ್ತೊಂದು ಮೋದಕಗಳೊಂದಿಗೆ ನೈವೇದ್ಯದಿಂದ ತುಂಬಿದ ತಟ್ಟೆಯನ್ನು ಅವನ ಮುಂದೆ ಇಟ್ಟು, ಪ್ರೀತಿಯಿಂದ ಆಗ್ರಹಪಡಿಸಿ; ಬಂದ ಅತಿಥಿಗಳ ಆತಿಥ್ಯಕ್ಕಿಂತ ಆ ಗಣೇಶನ ಆರಾಧನೆಯ ಕಡೆಗೆ ಹೆಚ್ಚು ಗಮನ ಕೊಡಿ; ಆರತಿ ಹೇಳುವಾಗ ಯಾರೊಂದಿಗೂ ಸ್ಪರ್ಧೆ ಮಾಡಬೇಡಿ ಮತ್ತು ಮುಖ್ಯವಾಗಿ, ಈ ಮಹಾವಿನಾಯಕ ತನ್ನ ಸ್ಥಾನಕ್ಕೆ ಮರಳಲು ಹೊರಟಾಗ, ಹೃದಯ ತುಂಬಿ ಬರಲಿ ಮತ್ತು ಪ್ರೀತಿಯ ವಿಶ್ವಾಸಪೂರ್ವಕ ವಿನಂತಿಯಾಗಲಿ, ‘ಮಂಗಲಮೂರ್ತಿ ಮೋರ್ಯಾ, ಮುಂದಿನ ವರ್ಷ ಬೇಗ ಬನ್ನಿ.’

ಸಂಪಾದಕೀಯದ ಕೊನೆಯಲ್ಲಿ ಸದ್ಗುರು ಶ್ರೀ ಅನಿರುದ್ಧ ಬಾಪು ಬರೆಯುತ್ತಾರೆ -

‘ನನ್ನ ಶ್ರದ್ಧಾಳು ಸ್ನೇಹಿತರೇ, ‘ಮುಂದಿನ ವರ್ಷ ಬೇಗ ಬನ್ನಿ’ ಈ ವಾಕ್ಯದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಬರುವ ದಿನಾಂಕ ಈಗಾಗಲೇ ನಿಗದಿಯಾಗಿರುತ್ತದೆ, ಹಾಗಾದರೆ ಕೇವಲ ಬಾಯಿಂದ ‘ಬೇಗ ಬನ್ನಿ’ ಎಂದು ಹೇಳುವುದರ ಹಿಂದೆ ಯಾವ ಅರ್ಥವಿರಬಹುದು? ಇದರಲ್ಲಿ ಒಂದೇ ಅರ್ಥವಿದೆ, ಅದು ಮುಂದಿನ ವರ್ಷದವರೆಗೆ ಕಾಯಬೇಡಿ, ದೇವ ಮೋರ್ಯಾ, ನೀವು ಪ್ರತಿದಿನವೂ ಬರುತ್ತಿರಿ ಮತ್ತು ಅದು ಆದಷ್ಟು ಬೇಗ ನಡೆಯಲಿ.’


मराठी >> हिंदी >> বাংলা>> ગુજરાતી>>

Friday, 18 July 2025

ಅನಿರುದ್ಧ ಬಾಪೂ ಅವರು ವಿವರಿಸಿದ ಶ್ರೀ ಗಣೇಶನ ಭಕ್ತಿ, ನಂಬಿಕೆ ಮತ್ತು ವಿಜ್ಞಾನದ ಪಯಣ


ನಾವು ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವಾಗ, ಅದು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿ ಎಂದು ವಿಘ್ನಹರ್ತ ಶ್ರೀ ಗಣೇಶನನ್ನು ಸ್ಮರಿಸುತ್ತೇವೆ, ಪೂಜಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ಚಿಕ್ಕವರಿದ್ದಾಗ ಅಕ್ಷರಗಳನ್ನು ಬರೆಯಲು ಕಲಿಯುವಾಗಲೂ, ನಾವು ಮೊದಲು 'ಶ್ರೀ ಗಣೇಶಾಯ ನಮಃ' ಎಂದೇ ಬರೆಯಲು ಕಲಿಯುತ್ತೇವೆ. ಎಷ್ಟು ವಿವಿಧ ದೇವರ ದೇವಸ್ಥಾನಗಳಿದ್ದರೂ, ಶ್ರೀ ಗಣೇಶ ಮಾತ್ರ ಪ್ರತಿಯೊಂದು ದೇವಸ್ಥಾನದ ಗರ್ಭಗುಡಿಯ ಪ್ರವೇಶ ದ್ವಾರದಲ್ಲಿ ವಿರಾಜಮಾನನಾಗಿರುತ್ತಾನೆ. 'ಮಂಗಲಮೂರ್ತಿ ಶ್ರೀ ಗಣಪತಿ' ನಿಜಕ್ಕೂ ಎಲ್ಲ ಶುಭ ಕಾರ್ಯಗಳ ಅಗ್ರಸ್ಥಾನದಲ್ಲಿರುವ, ನಮ್ಮ ಭಾರತದಾದ್ಯಂತ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಪ್ರಿಯವಾದ ದೈವವಾಗಿದೆ.

ಇದೇ ಗಣಪತಿಯ ಬಗ್ಗೆ, ದೈನಿಕ 'ಪ್ರತ್ಯಕ್ಷ'ದ ಕಾರ್ಯಕಾರಿ ಸಂಪಾದಕ ಡಾ. ಶ್ರೀ ಅನಿರುದ್ಧ ಧೈರ್ಯಧರ ಜೋಶಿ (ಸದ್ಗುರು ಶ್ರೀ ಅನಿರುದ್ಧ ಬಾಪೂ) ಅವರು ತಮ್ಮ ಅಧ್ಯಯನ ಮತ್ತು ಚಿಂತನೆಯಿಂದ ಮೂಡಿಬಂದ ವಿಚಾರಗಳನ್ನು ಅನೇಕ ಸಂಪಾದಕೀಯಗಳಲ್ಲಿ ಮಂಡಿಸಿದ್ದಾರೆ. ಈ ಸಂಪಾದಕೀಯಗಳು ಕೇವಲ ಮಾಹಿತಿ ನೀಡಲು ಸೀಮಿತವಾಗಿಲ್ಲ, ಬದಲಿಗೆ ಭಕ್ತರ ಮನಸ್ಸಿನ ಪ್ರಶ್ನೆಗಳಿಗೆ ಉತ್ತರಿಸುವ, ಭಕ್ತಿಯನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಮತ್ತು ಗಣಪತಿಯ ವಿವಿಧ ರೂಪಗಳನ್ನು ಆಳವಾಗಿ ಪರಿಚಯಿಸುವಂತಿವೆ.

ಈ ಸಂಪಾದಕೀಯಗಳಲ್ಲಿ ಬಾಪೂ ಅವರು ವೇದ, ಪುರಾಣ, ಸಂತ ಸಾಹಿತ್ಯದಿಂದ ಗಣಪತಿಯ ಸ್ವರೂಪ ಮತ್ತು ಅದರ ಹಿಂದಿನ ತತ್ತ್ವಜ್ಞಾನವನ್ನು ಬಹಳ ಸುಲಭ ಮತ್ತು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ. ಬ್ರಹ್ಮಣಸ್ಪತಿ-ಗಣಪತಿ ಸಂಕಲ್ಪನೆ, ವಿಶ್ವದ ಘನಪ್ರಾಣ ಗಣಪತಿ, ಗಣಪತಿಯ ಜನ್ಮ ಕಥೆಯ ಹಿಂದಿನ ಸಿದ್ಧಾಂತ, ಸಾರ್ವಜನಿಕ ಗಣೇಶೋತ್ಸವದ ಹಿಂದಿನ ಪಾತ್ರ, ಮೂಲಾಧಾರ ಚಕ್ರದ ಅಧಿಷ್ಠಾತ ಗಣಪತಿ, ಗಣಪತಿಯ ಪ್ರಮುಖ ಹೆಸರುಗಳು, ಅವನ ವಾಹನ ಮೂಷಕರಾಜ, ವ್ರತಬಂಧ ಕಥೆ, ಮೋದಕ ಕಥೆ ಮತ್ತು ಆ ಕಥೆಗಳ ಭಾವಾರ್ಥ... ಈ ಎಲ್ಲ ವಿಷಯಗಳನ್ನು ಬಾಪೂ ಅವರು ಇಂತಹ ರಚನೆಯಲ್ಲಿ ಮಂಡಿಸಿದ್ದಾರೆ, ಅಂದರೆ ನಮ್ಮ ಮನಸ್ಸಿನ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವಂತೆ.

ಗಣಪತಿ ದೈವದ ಬಗ್ಗೆ ಈ ವಿವೇಚನೆಯು ಶ್ರದ್ಧಾವಂತ ಭಕ್ತರಿಗೆ ಕೇವಲ ಮಾಹಿತಿಯಲ್ಲ, ಬದಲಿಗೆ ಭಾವನಾತ್ಮಕ ದೃಷ್ಟಿಕೋನದಿಂದ ನಮ್ಮ ಶ್ರದ್ಧೆಯನ್ನು ಇನ್ನಷ್ಟು ದೃಢಪಡಿಸುವಂತಹದ್ದು.

ದೈನಿಕ 'ಪ್ರತ್ಯಕ್ಷ'ದಲ್ಲಿ ಬೇರೆ ಬೇರೆ ಸಮಯದಲ್ಲಿ ಪ್ರಕಟವಾದ ಈ ಸಂಪಾದಕೀಯಗಳು ಈಗ ಬ್ಲಾಗ್‌ಪೋಸ್ಟ್ ರೂಪದಲ್ಲಿ ನಮ್ಮೆಲ್ಲರಿಗೂ ಲಭ್ಯವಾಗುತ್ತಿವೆ — ಬಾಪೂ ಅವರು ನೀಡಿದ ಆ ಅಮೂಲ್ಯ ವಿಚಾರಗಳ ಪರಿಮಳ ನಮ್ಮೆಲ್ಲರ ಮನಸ್ಸಿನಲ್ಲಿ ಹರಡಲಿ ಎಂಬ ಒಂದೇ ಉದ್ದೇಶದಿಂದ.

_____________________________________________

Tuesday, 15 July 2025

ಘೋರಕಷ್ಟೋಧ್ಧರಣ ಸ್ತೋತ್ರ ಪಠಣ

 
ಶ್ರಾವಣ ತಿಂಗಳು ಶ್ರವಣಭಕ್ತಿಯ ತಿಂಗಳು ಆಗಿದ್ದು, ಈ ತಿಂಗಳಿನಲ್ಲಿ ಹೆಚ್ಚು ಶ್ರವಣ, ಪಠಣ ಮತ್ತು ಪೂಜೆಯನ್ನು ಮಾಡುವ ಬಗ್ಗೆ ಸದ್ಗುರು ಶ್ರೀ ಅನಿರುದ್ಧ ಬಾಪುರವರು ಶೃದ್ಧಾವಾನರಿಗೆ ಹೇಳಿದ್ದೇ ಇದೆ. ಬಾಪುರವರು ತಮ್ಮ ಪ್ರವಚನದ ಮೂಲಕ ಮತ್ತು ಅಗ್ರಲೇಖನಗಳಲ್ಲಿ ಹಲವಾರು ಬಾರಿ ನಾಮಸ್ಮರಣೆ, ಮಂತ್ರ-ಸ್ತೋತ್ರ ಪಠಣ, ಆಧ್ಯಾತ್ಮಿಕ ಗ್ರಂಥಗಳ ಪಠಣ ಮತ್ತು ಸಾಮೂಹಿಕ ಉಪಾಸನೆಯ ಮಹತ್ವವನ್ನು ಸ್ಪಷ್ಟಪಡಿಸಿದ್ದಾರೆ. ಬಾಪು ಅವರು 28 ಜುಲೈ 2011 ರಂದು ನೀಡಿದ ತಮ್ಮ ಮರಾಠಿ ಪ್ರವಚನದಲ್ಲಿ 'ಶ್ರಾವಣ ಮಾಸದಲ್ಲಿಯ ಘೋರಕಷ್ಟೋಧ್ಧರಣ ಸ್ತೋತ್ರ ಪಠಣದ ಮಹತ್ವ' ದ ಕುರಿತು ಹೇಳಿದರು. ಬಾಪು ಅವರ ಹೇಳಿಕೆಯ ಸಾರಾಂಶ ಹೀಗಿದೆ -
 
"ಸದ್ಗುರುತತ್ವದಷ್ಟು ಪ್ರೀತಿ ಯಾರೂ ಮಾಡುವುದಿಲ್ಲ ಮತ್ತು ಮಾಡಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಸೀಮಿತತೆ ಎಷ್ಟೇ ಹೆಚ್ಚಿದರೂ, ಅದು ಸೀಮಿತವೇ ಇರುತ್ತದೆ. ಆದರೆ ಕೇವಲ ಪರಮಾತ್ಮ ಮಾತ್ರ  ಅಪರಿಮಿತ.. ಈ ಸದ್ಗುರುತತ್ತ್ವವು ಎಲ್ಲಿಯೂ ಮುರಿದಿಲ್ಲ. ಇದು ನಿರ್ಗುಣವಾಗಿದೆ, ನಿರಾಕಾರವಾಗಿದೆ, ಆದರೆ ಅದರ ಜೊತೆ ಅದು ಪೂರ್ಣ ಚೈತನ್ಯದಿಂದ ಕೂಡಿದೆ. ಘೋರಕಷ್ಟೋಧ್ಧರಣ ಸ್ತೋತ್ರವು ಶ್ರೀಗುರು ದತ್ತಾತ್ರೇಯರ ಸ್ತೋತ್ರವಾಗಿದ್ದು, ಇದನ್ನು ರಚಿಸಿದವರು ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರು. ಈ ಸ್ತೋತ್ರವು ಐದು ಶ್ಲೋಕಗಳನ್ನೊಳಗೊಂಡಿದ್ದು, ಸುಲಭವಾಗಿ  108 ಬಾರಿ ಪಠಿಸಬಹುದು ಹಾಗೆ ಇದೆ. ಅಂತಹ ಪ್ರಭಾವಶಾಲಿ ಸ್ತೋತ್ರವನ್ನು ನಾವು ಶ್ರಾವಣ ಮಾಸದಲ್ಲಿ ಪಠಿಸುತ್ತೇವೆ."
 
ಇದರಿಂದ ಈ ಸ್ತೋತ್ರವನ್ನು ಪ್ರತಿದಿನ ಪಠಿಸಬೇಕೆಂದು ನಮ್ಮ ಗಮನಕ್ಕೆ ಬರುವದು,  ಆದರೆ  ಪವಿತ್ರ ಶ್ರಾವಣ ಮಾಸದಲ್ಲಿ ಇದನ್ನು ಸಾಮೂಹಿಕವಾಗಿ 108 ಬಾರಿ ಪಠಿಸಬೇಕೆಂದು ಬಾಪು ಒತ್ತಿ ಹೇಳಿದ್ದಾರೆ, ಇದು ಪ್ರತಿಯೊಬ್ಬ ಭಕ್ತನಿಗೂ ಅಪಾರ ಫಲ ನೀಡುತ್ತದೆ.
 
ಸದ್ಗುರುಗಳ ಮಾರ್ಗದರ್ಶನದಂತೆ ಭಕ್ತರು ತಿಂಗಳು ಪೂರ್ತಿ ಸಾಮೂಹಿಕ ಸ್ತೋತ್ರ ಪಠಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನಃಪೂರ್ವಕವಾಗಿ ಭಾಗವಹಿಸುತ್ತಾರೆ. ಬಾಪು ಅವರು ಸತ್ಯಪ್ರವೇಶದಲ್ಲಿ 'ಯಜ್ಞೇನ-ದಾನೇನ-ತಪಸಾ' ಬಗ್ಗೆ ಹೇಳಿದ್ದಾರೆ. ಅದರಂತೆ ಸ್ತೋತ್ರಪಠಣದ ಜೊತೆಗೆ ಭಕ್ತರು ತಮ್ಮ ಇಚ್ಛೆಯಿಂದ ಅನ್ನಪೂರ್ಣ ಪ್ರಸಾದಮ್ ಯೋಜನೆಗೆ ಧಾನ್ಯ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಈ ಬಾರಿ ಪಠಣ ಅವಧಿಯಲ್ಲಿ ಇಚ್ಛೆಯುಳ್ಳ ಭಕ್ತರು ಕೆಳಗಿನ ಲಿಂಕ್ ಮೂಲಕ ಅನ್ನಪೂರ್ಣ ಮಹಾಪ್ರಸಾದಮ್ ಯೋಜನೆಗೆ ದೇಣಿಗೆ ನೀಡಬಹುದು.
 
ಘೋರಕಷ್ಟೋಧ್ಧರಣ ಸ್ತೋತ್ರದ ಕುರಿತು ಒಂದು ಕಥೆಯಿದೆ -
ಶಕ 1833ರಲ್ಲಿ ಅಂದರೆ ಕ್ರಿ.ಶ. 1911ರಲ್ಲಿ ಮಹಾನ್ ಯತಿವರ್ಯ ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರ ಇಪ್ಪತ್ತೊಂದನೇ ಚಾತುರ್ಮಾಸ ಕುರುಗಡ್ಡಿಯಲ್ಲಿ ಸಂಪನ್ನವಾಯಿತು. ಅಲ್ಲಿ ಸ್ವಾಮೀಜಿಯ ದರ್ಶನಕ್ಕೆ ಬಂದ ಭಕ್ತನೊಬ್ಬನು ಸಂತಾನಲಾಭ ಹಾಗೂ ಸಾಲ ಮುಕ್ತಿಗಾಗಿ ಪ್ರಾರ್ಥನೆ ಮಾಡಿದನು. ಸ್ವಾಮೀಜಿಯ ಅನುಗ್ರಹದಿಂದ ಕೂಡಲೇ ಆ ಭಕ್ತನಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಹೀಗೆ ಇಬ್ಬರು ಮಕ್ಕಳು ಜನಿಸಿದರು ಮತ್ತು ಅವನ ಮೇಲಿರುವ ಸಾಲವೂ ತೀರಿತು.
 
"ಭಕ್ತರ ಇಚ್ಛೆಗಳು ಈಡೇರಲಿ, ಮತ್ತು ಕಲಿಯುಗದಲ್ಲಿ ಭಕ್ತರು ಎದುರಿಸುತ್ತಿರುವ ಕಷ್ಟಗಳು ದೂರವಾಗಲಿ, ಅವರು ಶಾಶ್ವತ ಶುಭವನ್ನು ಪಡೆಯಲಿ, ನಮ್ಮ  ಕಷ್ಟಗಳು ಹೇಗೆ ದೂರವಾಯಿತು, ನಾವು ಹೇಗೆ ಸುಖಿಯಾದೆವು ಮತ್ತು ಜೊತೆಗೆ ಹೆಚ್ಚು ಭಕ್ತಿಯುಳ್ಳವರಾದೆವು; ಅದೇ ರೀತಿ ಭಕ್ತರ ಕಷ್ಟಗಳು ನಿವಾರಣೆಯಾಗಲು ಒಂದು ಸ್ತೋತ್ರವನ್ನು ಬರೆದುಕೊಟ್ಟರೆ ಎಲ್ಲ ಭಕ್ತರಿಗೂ ಅದರ  ಪ್ರಯೊಜನವಾಗುವದು" ಎಂದು ಆ ಭಕ್ತನು ಸ್ವಾಮೀಜಿಯವರಿಗೆ ವಿನಂತಿಸಿದನು. ಕರುಣಾಮಯ ಹೃದಯದ ಶ್ರೀವಾಸುದೇವಾನಂದಸರಸ್ವತಿ ಸ್ವಾಮಿ ಮಹಾರಾಜರು ಆ ವಿನಂತಿಯನ್ನು ಒಪ್ಪಿಕೊಂಡು ಈ ಘೋರಕಷ್ಟೋಧ್ಧರಣ ಸ್ತೋತ್ರವನ್ನು ರಚಿಸಿದರು.
 
ಧನ್ಯನಾದನು ಆ ಭಕ್ತನು ಮತ್ತು ಧನ್ಯರಾದರು ಶ್ರೀಮಹಾರಾಜರು. ಪವಿತ್ರ ದತ್ತಕ್ಷೇತ್ರ ನೃಸಿಂಹವಾಡಿಯಲ್ಲಿ ಈ ಸ್ತೋತ್ರವನ್ನು ನಿತ್ಯ ಪಠಿಸಲಾಗುತ್ತದೆ.
 
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ಘೋರಕಷ್ಟೋಧ್ಧರಣ ಸ್ತೋತ್ರದ ಸಾಮೂಹಿಕ ಪಠಣ ಸಂಸ್ಥೆಯ ಪರವಾಗಿ ಆಯೋಜಿಸಲಾಗುತ್ತದೆ. ಗುರುವಾರವನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಸಂಜೆ 5:30 ರಿಂದ ರಾತ್ರಿ 9:00 ರವರೆಗೆ ಪಠಣ ನಡೆಯುತ್ತದೆ. ಗುರುವಾರ ದಿನ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಮಧ್ಯಾಹ್ನ 4:00 ರಿಂದ ಸಂಜೆ 7:00 ರವರೆಗೆ ಪಠಣ ನಡೆಯುತ್ತದೆ. ಮತ್ತು ಭಕ್ತರ ಸೌಲಭ್ಯಕ್ಕಾಗಿ ಒಂದು ದಿನ ಆನ್ ‌ಲೈನ್ ಪಠಣವೂ ಏರ್ಪಡಿಸಲಾಗುತ್ತದೆ.
 
ಈ ಸ್ತೋತ್ರದ ಕೊನೆಯ ಶ್ಲೋಕದ ಪ್ರಕಾರ, ಈ ಸ್ತೋತ್ರ ಪಠಣದಿಂದ ಸದ್ಧರ್ಮ, ಪ್ರೇಮ, ಸದ್ಬುದ್ಧಿ, ಇಶ್ವರ ಭಕ್ತಿ ಮತ್ತು ಸತ್ಸಂಗ ದೊರೆಯುತ್ತದೆ. ಮಾನವನ ಲೋಕಿಕ ಮತ್ತು ಆಧ್ಯಾತ್ಮಿಕ ಇಚ್ಛೆಗಳು ಈಡೇರುತ್ತವೆ. ಭಗವಂತನ ಮೇಲಿನ ಪ್ರೀತಿ, ಭಗವಂತನ ಬಗ್ಗೆ ಆಕರ್ಷಣೆ ಹೆಚ್ಚಾಗುತ್ತದೆ. ಪರಮಾನಂದಸ್ವರೂಪ ಶ್ರೀಗುರು ದತ್ತಾತ್ರೇಯರಿಗೆ ನಮಸ್ಕರಿಸಿ, "ಘೋರಕಷ್ಟಗಳಿಂದ ನಮ್ಮನ್ನು ಉದ್ಧರಿಸು" ಎಂಬ ಮನವಿಯೂ ಈ ಸ್ತೋತ್ರದಲ್ಲಿ ಇದೆ.
 
ಈ ಸ್ತೋತ್ರದಲ್ಲಿ "ಶ್ಲೋಕಪಂಚಕಮೇತದ್ಯೋ ಲೋಕಮಂಗಲವರ್ಧನಮ್। ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್॥" ಎಂದು ಕೊನೆಯಲ್ಲಿ ಹೇಳಲಾಗಿದೆ. ಇದರಿಂದ ನಮಗೆ ತಿಳಿಯುತ್ತದೆ ಈ ಸ್ತೋತ್ರ ಜಗತ್ತಿಗೆ ಮಂಗಳಕರವಾಗಿದೆ". ಈ ಸ್ತೋತ್ರವನ್ನು ಸಂಪೂರ್ಣ ನಂಬಿಕೆಯಿಂದ ಪಠಿಸುವ ಭಕ್ತನು ಶ್ರೀಗುರು ದತ್ತಾತ್ರೇಯರಿಗೆ ಪ್ರಿಯನಾಗುತ್ತಾನೆ" ಎಂದು ಶ್ರೀವಾಸುದೇವಾನಂದಸರಸ್ವತಿ ಹೇಳುತ್ತಾರೆ. ‘ಶ್ರೀ ಗುರುವಿಗೆ ಪ್ರಿಯನಾಗುವುದು’  - ಇದು ಭಕ್ತನಿಗೆ ಅತಿ ಶ್ರೇಷ್ಠ ಸಾಧನೆ ಆಗಿದೆ.

ಶ್ರದ್ಧಾವಾನರು ತಮ್ಮ ಲೌಕಿಕ ಸಮಸ್ಯೆಗಳನ್ನು ಪರಿಹರಿಸುವ, ಅವರ ಆಸೆಗಳನ್ನು ಪೂರೈಸುವ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಈ ಪರಿಣಾಮಕಾರಿ ದತ್ತ ಸ್ತೋತ್ರವನ್ನು ಪಠಿಸುವ ಅವಕಾಶ ಸದ್ಗುರು ಶ್ರೀ ಅನಿರುದ್ಧರಿಂದ ಸಿಕ್ಕಿತು

ಭಕ್ತಿಯಿಂದ ಸೇವೆಯ ವಿವಿಧ ಆಯ್ಕೆಗಳನ್ನು ಶ್ರದ್ಧಾವಂತರಿಗೆ ಲಭ್ಯವಾಗುವಂತೆ ಮಾಡಿರುವ ಬಾಪೂರವರು ಎ.ಎ.ಡಿ.ಎಮ್. (ಅನಿರುದ್ಧಾಜ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್) ಅನ್ನು ಸ್ಥಾಪಿಸಿರುವುದೇ ಮೂಲತಃ ಘೋರಕಷ್ಟೋದ್ಧರಣ ಸ್ತೋತ್ರದ ಪ್ರಾತ್ಯಕ್ಷಿಕ (ಪ್ರ್ಯಾಕ್ಟಿಕಲ್) ರೂಪವಾಗಿದೆ.