ದೇಶಭಕ್ತರ ಪಾಲಿನ ಕರ್ಣಕಾಲ (ಕಾಲಭೈರವ) ಎಂಬ ಖ್ಯಾತಿ ಹೆಲ್ಡೇನ್ ಅವರದ್ದಾಗಿತ್ತು. ಮುಂಬೈ-ಪುಣೆಯಂತೆಯೇ ಅವರ ಅಧಿಕಾರದ ವ್ಯಾಪ್ತಿಯಲ್ಲಿರುವ ಕಾರಾಗೃಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳನ್ನು ಇರಿಸಲಾಗುತ್ತಿತ್ತು. ‘ಇವರ ಕಾರಾಗೃಹ ಎಂದರೆ ಭೂಮಿಯ ಮೇಲಿನ ನರಕ’ ಎಂದೇ ಅವರ ಕಾರಾಗೃಹದ ಗಾಳಿಯನ್ನು ಸೇವಿಸಿ ಬಂದ ಜನರು ವರ್ಣಿಸುತ್ತಿದ್ದರು. ಅವರು ಬಂದ ತಕ್ಷಣವೇ ವಿಚಾರಣೆಯನ್ನು ಪ್ರಾರಂಭಿಸಿದರು. ಅವರ ಕಿವಿಯು ಬಹಳ ತೀಕ್ಷ್ಣವಾಗಿತ್ತು ಮತ್ತು ಮಲ್ಹಾರರಾವ್ ಅವರು ಸಹ ಫಕೀರಬಾಬಾ ಮತ್ತು ಫಡಕೆ ಮಾಸ್ತರರ ಸಹಾಯದಿಂದ ವಿಠ್ಠಲ ಮಂದಿರದ ಗಜರ ಮತ್ತು ತಾಳಗಳ ಶಬ್ದವನ್ನು ದ್ವಿಗುಣಗೊಳಿಸಿದ್ದರು. ಆ ಶಬ್ದಕ್ಕೆ ತೊಂದರೆಗೊಳಗಾಗಿ ‘ಏನು ನಡೆಯುತ್ತಿದೆ’ ಎಂದು ನೋಡಲು
ಹೆಲ್ಡೇನ್ ಅವರು ನೇರವಾಗಿ ಅದೇ ದಿಕ್ಕಿನಲ್ಲಿ ಹೊರಟರು. ಅವರ ಬೆನ್ನ ಹಿಂದೆ ಮಲ್ಹಾರರಾವ್, ಧನಾಜಿ ಪಾಟೀಲರು ಇಬ್ಬರೇ ಜನ ಮತ್ತು ಹೆಲ್ಡೇನ್ ಅವರ ನಾಲ್ಕು ವಿಶೇಷ ವಿಶ್ವಾಸು ಭಾರತೀಯ ಪೊಲೀಸ್ ಅಧಿಕಾರಿಗಳು ಹೊರಟರು.
ರಸ್ತೆಯಲ್ಲಿ ಹೋಗುತ್ತಾ, ಹೋಗುತ್ತಾ ಮಲ್ಹಾರರಾವ್ ಅವರು ಆ ಕೊಲೆಯ ಬಗ್ಗೆ ಮತ್ತು ಆ ಸ್ಥಳದ ಬಗ್ಗೆ ಹೆಲ್ಡೇನ್ ಸಾಹೇಬರಿಗೆ ಸರಿಯಾಗಿ ಹೇಳಿಬಿಟ್ಟರು. ಇದರಿಂದ ಹೆಲ್ಡೇನ್ ಸಾಹೇಬರ ಮನಸ್ಸಿನಲ್ಲಿನ ಸಂಶಯವು ಇನ್ನಷ್ಟು ಬಲಗೊಳ್ಳಲಿದೆ ಎಂದು ಮಲ್ಹಾರರಾವ್ ಅವರಿಗೆ ಸಂಪೂರ್ಣ ಖಾತ್ರಿಯಿತ್ತು.
ಈ ನಾಲ್ಕೂ ಪೊಲೀಸ್ ಆಫೀಸರ್ಸ್ ಇಲಾಖೆಯಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಅದರಲ್ಲಿ, ಗ್ರಾಮದಲ್ಲಿ ಕೊಲೆಯಾದ ಪೊಲೀಸ್ ಆಫೀಸರ್ ಹೆಲ್ಡೇನ್ ಅವರ ಐದನೇ ನಾಯಿಯೇ ಆಗಿದ್ದ ಮತ್ತು ಈ ಕಾರಣದಿಂದಾಗಿ ಆ ನಾಲ್ವರೂ ಕೆರಳಿದ್ದರು.
ಮಂದಿರದ ಆವರಣಕ್ಕೆ ತಲುಪಿದ ತಕ್ಷಣ ಹೆಲ್ಡೇನ್ ಅವರು ಪ್ರಾಂಗಣದ ಹೊರಗೇ ಕುಳಿತುಕೊಂಡರು ಮತ್ತು ಅವರ ಆದೇಶದಂತೆ ಆ ನಾಲ್ವರೂ ಮಂದಿರ ಮತ್ತು ಸಭಾಮಂಟಪವನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ಶುರು ಮಾಡಿದರು; ಆದರೆ ಅವರಿಗೂ ಕೆಲವು ನಿಯಮಗಳನ್ನು ಅಂದರೆ ಮಂದಿರದ ಪಾವಿತ್ರ್ಯವನ್ನು ಭಂಗಗೊಳಿಸದ ನಿಯಮಗಳನ್ನು ಪಾಲಿಸಲೇಬೇಕಾಗಿತ್ತು. ಆದರೆ ‘ಎಲ್ಲ ನಿಯಮಗಳನ್ನು ಪಾಲಿಸಿದರೂ ಕೈಗೆ ಏನೂ ಸಿಗುತ್ತಿಲ್ಲ’ ಎಂದು ತಿಳಿದ ಕೂಡಲೇ ಆ ನಾಲ್ವರೂ ಧಾರ್ಮಿಕ ನಿಯಮಗಳನ್ನು ಬದಿಗೊತ್ತಿ, ಕೆಲವು ಕಡೆ ನುಗ್ಗಿ ಪ್ರತಿಯೊಂದು ಮೂಲೆ ಮತ್ತು ಕಪಾಟನ್ನು ತನಿಖೆ ಮಾಡಲು ಶುರು ಮಾಡಿದರು.
ಗುಪ್ತ ದ್ವಾರಗಳು, ಗುಪ್ತ ಕೊಠಡಿಗಳು ಮತ್ತು ನೆಲಮಾಳಿಗೆ ಅವರಿಗೆ ಸಿಗಲು ಸಾಧ್ಯವೇ ಇರಲಿಲ್ಲ. ಇದಕ್ಕೆ ಎರಡು ಕಾರಣಗಳಿದ್ದವು. ಒಂದು, ಫಕೀರಬಾಬಾ ಅಂದರೆ ಶಿವರಾಮರಾಜನ್ ಅವರು ರಚನೆಯನ್ನೇ ಹಾಗೆ ಮಾಡಿದ್ದರು ಮತ್ತು ಎರಡೂ ಮಂದಿರಗಳ ನಿರ್ಮಾಣದಲ್ಲಿ ಭಾಗವಹಿಸಿದ್ದ ತಮಿಳು ಕೆಲಸಗಾರರು ಯಾವಾಗಲೋ ಅವರವರ ಗ್ರಾಮಗಳಿಗೆ ಹೋಗಿದ್ದರು. ಇನ್ನೊಂದು ಕಾರಣವೆಂದರೆ, ಅಂತಹ ಸ್ಥಳಗಳು ಮತ್ತು ಗುಪ್ತ ದ್ವಾರಗಳ ಬಳಿ ಭಜನೆಗಾಗಿ ಮಹಿಳೆಯರನ್ನೇ ಕುಳ್ಳಿರಿಸಲಾಗಿತ್ತು. ಅವರಲ್ಲಿ ಅನೇಕ ಮಹಿಳೆಯರು ಆ ನಾಲ್ವರ ಸಂಬಂಧಿಕರು, ಗ್ರಾಮದವರು ಅಥವಾ ಜಾತಿಯವರಾಗಿದ್ದರು ಮತ್ತು ಅಂತಹ ಮಹಿಳೆಯರ ನಡುವೆ ನುಗ್ಗಿ ಕಾರ್ಯಾಚರಣೆ ಮಾಡಿದರೆ ಆ ನಾಲ್ವರೂ ಅವರವರ ಜಾತಿ ಮತ್ತು ಗ್ರಾಮದಿಂದ ಬಹಿಷ್ಕೃತರಾಗಬಹುದಿತ್ತು.
ಆ ನಾಲ್ವರು ಹೊರಗೆ ಬಂದು ಹೆಲ್ಡೇನ್ ಅವರಿಗೆ ಸಣ್ಣದಾದ ಧ್ವನಿಯಲ್ಲಿ ಇಂಗ್ಲಿಷ್ನಲ್ಲಿ ಹೇಳಿದರು, “ಉಳಿದಂತೆ ಎಲ್ಲವೂ ಸರಿಯಾಗಿದೆ ಎನಿಸುತ್ತದೆ, ಆದರೆ ಮೂರು ವಿಷಯಗಳು ಕಣ್ಣಿಗೆ ಕಡಿಯುತ್ತಿವೆ. 1) ಮಹಿಳೆಯರು ಒಂದು ಬದಿಯಲ್ಲಿ, ಪುರುಷರು ಒಂದು ಬದಿಯಲ್ಲಿ ಹೀಗೆ ಕುಳಿತುಕೊಳ್ಳುವ ಸಂಪ್ರದಾಯವಿದ್ದರೂ ಸಹ ಇಲ್ಲಿನ ಮಂದಿರದಲ್ಲಿ ಮಹಿಳೆಯರ ಗುಂಪುಗಳು
ಪುರುಷರಿಂದ ಬೇರೆಯಾಗಿದ್ದರೂ ಸಹ ಸಭಾಮಂಟಪದಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದವು. 2) ಮಂದಿರದ ಸಭಾಮಂಟಪದ ಹೊರಗಿನ ಪ್ರಾಂಗಣದಲ್ಲಿ ಒಂದು ಹೊಸದಾಗಿ ನಿರ್ಮಿಸಿದ ಮಂಟಪವಿದೆ. ಎಲ್ಲಿ ಕೊಲೆಯಾಯಿತು, ಅದೇ ಸ್ಥಳದಲ್ಲಿ ಶುದ್ಧೀಕರಣದ ದೊಡ್ಡ ಹೋಮ ನಡೆಯುತ್ತಿದೆ. ಹೋಮಕುಂಡವನ್ನು ತುಂಬಾ ದೊಡ್ಡ ಗಾತ್ರದ್ದಾಗಿ ಮಾಡಲಾಗಿದೆ ಮತ್ತು ಇಲ್ಲಿಯೂ ಸಾಕಷ್ಟು ಜನಸಂದಣಿ ಇದೆ. ಮುಖ್ಯವಾಗಿ ಹದಿನೆಂಟು ಪಗಡ ಜಾತಿಗಳ ಪೈಕಿ (ಆ ಕಾಲದ ಸಂಪ್ರದಾಯದ ಪ್ರಕಾರ ಹದಿನೆಂಟು ಪ್ರಮುಖ ಜಾತಿಗಳು, ಅವರ ಪ್ರತಿ ಜಾತಿಯ ಪಗಡಿ ಅಥವಾ ಪಾಗೋಟೆ ಅಥವಾ ಫೇಟಾ ಕೇವಲ ಅವರ ಜಾತಿಯವರು ಮಾತ್ರ ಬಳಸುತ್ತಿದ್ದರು.) ಪ್ರತಿಯೊಂದು ಜಾತಿಯ ಪ್ರಮುಖ ನಾಗರಿಕರು ಸುತ್ತಮುತ್ತಲಿನ ಗ್ರಾಮಗಳಿಂದಲೂ ಬರುತ್ತಿದ್ದಾರೆ ಮತ್ತು ಅವರೆಲ್ಲರನ್ನೂ ನೋಯಿಸಿದರೆ ದೊಡ್ಡ ಅಸಂತೋಷ ಉಂಟಾಗಬಹುದು. ಕಣ್ಣಿಗೆ ಕಡಿಯುವ ವಿಷಯವೆಂದರೆ, ಒಂದೇ ಒಂದು ಜಾತಿಗೆ ಸಹ ಮಂಟಪದ ಹೊರಗೆ ಇರಿಸಲಾಗಿಲ್ಲ. ಗ್ರಾಮದ ಹೊರಗೆ ವಾಸಿಸುವ ಜಾತಿಯ ಜನರಿಗೂ ಈ ಮಂಟಪದಲ್ಲಿ ಸ್ಥಾನವಿದೆ. ಈ ಜನರಿಗೆ ಇಷ್ಟು ಗೌರವ ಸಿಗಲು ಕಾರಣವೇನು? ಗ್ರಾಮದ ಉಚ್ಚವರ್ಣದ ಜನರು ಅಂದರೆ ಬ್ರಾಹ್ಮಣ, ಕ್ಷತ್ರಿಯ ಮತ್ತು ವ್ಯಾಪಾರಿ ವರ್ಗ ಇದಕ್ಕೆ ವಿರೋಧವೇಕೆ ಮಾಡುತ್ತಿಲ್ಲ? ಇದರ ಸ್ಪಷ್ಟ ಅರ್ಥವೇನೆಂದರೆ, ಏನೋ ಒಂದು ಪಿತೂರಿ ನಡೆಯುತ್ತಿದೆ. 3) ಅನೇಕ ಮುಖಗಳು ಅಪರಿಚಿತವಾಗಿವೆ ಎನಿಸುತ್ತಿವೆ. ಈ ಪ್ರದೇಶದವರು ಎನಿಸುತ್ತಲೇ ಇಲ್ಲ. ಅಂತಹ ಎಲ್ಲ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ಎಲ್ಲ ಜಾತಿ ಪ್ರಮುಖರನ್ನು ಹಿಡಿದು ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ ಕರೆದುಕೊಂಡು ಹೋಗೋಣವೇ? ಹಂಟರ್ನ ನಾಲ್ಕಾರು ಏಟುಗಳು ಬಿದ್ದ ನಂತರ ಯಾರಾದರೂ ಒಬ್ಬರು ಮಾತನಾಡಲು ಶುರು ಮಾಡೇ ಮಾಡುತ್ತಾರೆ.”
ಹೆಲ್ಡೇನ್ ಅವರು ತಮ್ಮ ಅಸ್ವಸ್ಥತೆಯನ್ನು ಮರೆಮಾಚುತ್ತ ಇಂಗ್ಲಿಷ್ನಲ್ಲಿಯೇ ಹೇಳಿದರು, “ಈ ರೀತಿ ಏನನ್ನೂ ಮಾಡಲು ಮೇಲಿನಿಂದ ಸಕ್ತವಾಗಿ ನಿಷೇಧವಿದೆ. ಏಕೆಂದರೆ ಎಲ್ಲ ಭಾರತೀಯರಿಗೆ, ಮುಖ್ಯವಾಗಿ ಎಲ್ಲ ಜಾತಿ ಪ್ರಮುಖರಿಗೆ ಮತ್ತು ಗ್ರಾಮ ಪ್ರಮುಖರಿಗೆ ‘ರಾಣೀಯ ಜಾಹೀರನಾಮಾ’ (ಕ್ವೀನ್ಸ್ ಪ್ರೊಕ್ಲಮೇಷನ್) ಬಗ್ಗೆ ದೇಶದಾದ್ಯಂತ ಸರಕಾರ ವಿರೋಧಿ ಸುಶಿಕ್ಷಿತರು ಸವಿಸ್ತಾರವಾದ ಮಾಹಿತಿಯನ್ನು ನೀಡಿದ್ದಾರೆ. ಆದ್ದರಿಂದ ನನಗೆ ಮೇಲಿನಿಂದ ಅನುಮತಿ ಪಡೆಯಬೇಕಾಗುತ್ತದೆ. ಏಕೆಂದರೆ ‘ಜಾಲಿಯನ್ವಾಲಾ ಬಾಗ್’ ಪ್ರಕರಣದ ನಂತರ ಬ್ರಿಟಿಷ್ ಪಾರ್ಲಿಮೆಂಟ್ ಕೆಲವು ವಿಷಯಗಳಲ್ಲಿ ಸಂಯಮವನ್ನು ಕಾಯ್ದುಕೊಳ್ಳುತ್ತಿದೆ ಮತ್ತು ಅಂತಹ ಸಂಯಮವನ್ನು ಕಾಯ್ದುಕೊಳ್ಳುವ ಆದೇಶ ನಮ್ಮೆಲ್ಲರಿಗೂ ಬಂದಿದೆ. ಅದರಲ್ಲಿ, ‘ ಸನ್ 28 ರ ದಾಂಡೀ ಯಾತ್ರೇಯಲ್ಲಿ ಅನೇಕ ಭಾರತೀಯರ ತಲೆಗಳು ಒಡೆದವು’ ಅದರ ವರ್ಣನೆ ಮತ್ತು ಛಾಯಾಚಿತ್ರಗಳನ್ನು ಜಗತ್ತಿನಾದ್ಯಂತದ ವೃತ್ತಪತ್ರಿಕೆಗಳು ಪ್ರಕಟಿಸಿವೆ. ಆದ್ದರಿಂದ ಸ್ವಲ್ಪ ಸಬೂರಿ ಕಾಯ್ದುಕೊಳ್ಳೋಣ.”
ಅವರೆಲ್ಲರೂ ಹೊರಟು ಹೋಗುತ್ತಿದ್ದಂತೆಯೇ ಮಲ್ಹಾರರಾವ್ ಅವರು ಪ್ರತಿ ಜಾತಿ ಮತ್ತು ಗ್ರಾಮದ ತಮ್ಮ ಪ್ರಮುಖ ಸಹಚರರನ್ನು ಕರೆದುಕೊಂಡು ಬಹಳ ಶಾಂತವಾಗಿ ವಿಠ್ಠಲ
ಮಂದಿರದ ಒಂದು ಗುಪ್ತ ಕೋಣೆಗೆ ಹೋದರು. ಹೆಲ್ಡೇನ್ ಮತ್ತು ಅವರ ಆಫೀಸರ್ಸ್ ನಡುವಿನ ಎಲ್ಲ ಸಂಭಾಷಣೆಯನ್ನು ಮಲ್ಹಾರರಾವ್ ಎಲ್ಲರಿಗೂ ಚೆನ್ನಾಗಿ ವಿವರಿಸಿ ಹೇಳಿದರು.
ಕೆಲವರು ವಿನಮ್ರತೆಯಿಂದ ಪ್ರಶ್ನಿಸಿದರು, “‘ರಾಣೀಯ ಜಾಹೀರನಾಮಾ’ ಅಂದರೆ ನಿಖರವಾಗಿ ಏನು? ಜಾಲಿಯನ್ವಾಲಾ ಬಾಗ್ ಎಲ್ಲಿದೆ ಮತ್ತು ಅಲ್ಲಿ ಏನಾಯಿತು? ದಾಂಡೀ ಯಾತ್ರೆಯಲ್ಲಿ ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದ್ದಾಗ ತಲೆಗಳು ಹೇಗೆ ಒಡೆಯಿತು?”
ಮಲ್ಹಾರರಾವ್ ಅವರು ಶಾಂತವಾಗಿ ಕಣ್ಣುಗಳನ್ನು ಮುಚ್ಚಿ ಸ್ವಯಂಭಗವಾನನ ಮಂತ್ರಗಜರವನ್ನು ಮಾಡಿದರು ಮತ್ತು ಒಂದೊಂದೇ ವಿಷಯವನ್ನು ಹೇಳಲು ಪ್ರಾರಂಭಿಸಿದರು.
(ಕಥೆ ಮುಂದುವರೆಯುತ್ತದೆ)
मराठी >> हिंदी >> English >> ગુજરાતી>> తెలుగు>> বাংলা>> தமிழ்>> മലയാളം>>

.jpg)

.jpg)