Saturday, 2 November 2013

ಶ್ರೀಗಂಗಾ ತ್ರಿವೇಣಿ Algorithm

ಮೊನ್ನೆ ಅಂದರೆ ೧೯ ಸಪ್ಟೆಂಬರ್ ೨೦೧೩ ರಂದು ಸದ್ಗುರು ಬಾಪೂರವರು ’ಶ್ರೀಗಂಗಾ ತ್ರಿವೇಣಿ Algorithm’ ನ್ನು ಎಲ್ಲಾ ಶ್ರದ್ಧಾವಾನರಿಗೆ ತಿಳಿಸಿ ಹೇಳಿದಾಗ, ಬಾಪೂರವರು Pascal Triangle ನ Algorithm ಒಟ್ಟಿಗೆ ಇದ್ದ ಸಂದರ್ಭವನ್ನು ಕೊಟ್ಟರು. ಶ್ರೀಗಂಗಾ ತ್ರಿವೇಣಿ algorithm (ಎಲ್ಗೋರಿದಮ್) ಬಗ್ಗೆ ತಿಳಿಸುವಾಗ ಬಾಪೂ ಹೇಳಿದರು, ’ಗಂಗಾ-ಯಮುನಾ-ಸರಸ್ವತಿ ಈ ಮೂರು ನದಿಗಳ ಎಲ್ಲಿ ಸಂಗಮವಾಗುವದು ಅದಕ್ಕೆ ತ್ರಿವೇಣಿ ಸಂಗಮ ಹೇಳುತ್ತಾರೆ. "ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳು ನಮ್ಮ ದೇಹದಲ್ಲಿ ಇಡಾ, ಪಿಂಗಲಾ ಹಾಗು ಸುಷುಮ್ನಾ ನಾಡಿಯ ರೂಪದಲ್ಲಿರುತ್ತದೆ, "ಮನುಷ್ಯನ ಹಣೆಯ ಮಧ್ಯಭಾಗದಲ್ಲಿ ಅಂದರೆ ಆಜ್ನಾಚಕ್ರದಲ್ಲಿ ಈ ಮೂರು ನಾಡಿಗಳ ತ್ರಿವೇಣಿ ಸಂಗಮವಾಗುವದು. ಸುಷುಮ್ನೆಯಲ್ಲಿ ಹನುಮಂತನ ಸಂಚಾರವಿರುವದು ಅಂದರೆ ಅದರಲ್ಲಿ ಮಹಾಪ್ರಾಣನ ಸಾಮ್ರಾಜ್ಯವಿರುವದು.

ನಮ್ಮ ಮನದಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ಕುರಿತಾಗಿ ನಮಗೆ ಗೊತ್ತಿರುವುದು ಆವಶ್ಯಕವಾಗಿದೆ. ಈ ಮೂರು ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲಾ ಪಾಪಗಳ ಕ್ಷಾಲನವಾಗುವುದೆಂಬ ಸಿದ್ಧಾಂತವಿದೆ. ಆದರೆ ತ್ರಿವೇಣಿ ಸಂಗಮದಲ್ಲಿ ನಿಜವಾಗಲೂ ಸ್ನಾನಮಾಡುವುದೆಂದರೆ ನಮ್ಮ ಮನದಲ್ಲಿಯ ಗಂಗಾ, ಯಮುನಾ ಸರಸ್ವತಿಯ ಸಂಗಮದಲ್ಲಿ ಅಂದರೆ ಇಡಾ, ಪಿಂಗಲಾ ಹಾಗು ಸುಷುಮ್ನೆಯ ಸಂಗಮದಲ್ಲಿ ಸ್ನಾನ ಮಾಡಿದಂತಿರುವದು. ಮತ್ತು ಈ ಸಂಧಿಯು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ.

 
                                          श्रीगंगा त्रिवेणी Algorithm

ಮೇಲಿನ ಆಕೃತಿಯು ನಮ್ಮ ದೇಹದಲ್ಲಿಯ ಇಡಾ, ಪಿಂಗಲಾ ಹಾಗು ಸುಷುಮ್ನಾ ಅಂದರೆ ಗಂಗಾ, ಯಮುನಾ ಹಾಗು ಸರಸ್ವತಿಯ ಕಾರ್ಯವನ್ನು ತೋರಿಸುವದು. ಈ ತ್ರಿಕೋನದಲ್ಲಿ ೧ ರಿಂದ ೯ ಹಾಗು ೦ ಯ ಅಂಕೆಯು ಒಂದು ನಿರ್ಧಾರಿತ ಕ್ರಮದಲ್ಲಿ ಬರುವದು. ಕೇವಲ ಸುಷುಮ್ನಾ ನಾಡಿಯ ಮೇಲೆ ನಮಗೆ ಶೂನ್ಯ ಕಾಣುತ್ತದೆ. ಈ ಶೂನ್ಯಾವಸ್ಥೆ ಅಂದರೆ ಶಾಂತ-ತೃಪ್ತಾವಸ್ಥೆ ಅಂದರೇನೆ ಪೂರ್ಣತ್ವ. ಹನುಮಂತನು ಪೂರ್ಣನಿರುವರು. ಆದ್ದರಿಂದ  ಸುಷುಮ್ನಾ ನಾಡಿಯಲ್ಲಿ ಅವರ ಸಂಚಾರವಿರುವದು. ಈ ಸುಷುಮ್ನೆಯನ್ನೇ ’ಜ್ಯೋತಿಷಮತಿ’ ಕೂಡ ಹೇಳುವರು ಯಾಕೆಂದರೆ ಇದಕ್ಕೆ ಮುಂದಿನದು ಗೊತ್ತಿರುವದು.

ಆದರೆ ಈ ಗಂಗಾ-ತ್ರಿವೇಣಿಯ ತ್ರಿಕೋನದಲ್ಲಿ ಸ್ನಾನ ಹೇಗೆ ಮಾಡಬೇಕು? ನಮ್ಮ ಮೆಚ್ಚಿನ ದೇವರ ಪ್ರತಿಮೆಗೆ (ಮೂರ್ತಿ/ಫ್ರೇಮ್) ಅಭಿಷೇಕವನ್ನು ಮಾಡುವಾಗ ಹರಿವಾಣದ ಕೆಳಗೆ ಈ ಶ್ರೀಗಂಗಾ ತ್ರಿವೇಣಿ algorithm ತೆಗೆದಿರುವ ಕಾಗದವನ್ನಿಡಬೇಕು. ಇದರಿಂದ ಗಂಗಾ-ತ್ರಿವೇಣಿ ಸಂಗಮದ ಪಾವಿತ್ರ್ಯವು ಅಭಿಷೇಕದ ತೀರ್ಥದಲ್ಲಿ ಇಳಿಯುವದು. ಆನಂತರ ದೇವರ ಅಭಿಷೋಕ್ತ ಪ್ರತಿಮೆಗೆ ಅತ್ಯಂತ ಪ್ರೀತಿಯಿಂದ ಹಾಗು ಜಾಗರೂಕತೆಯಿಂದ ಒರೆಸಬೇಕು. ಅಭಿಷೇಕ ಮಾಡಿದ ಮೇಲೆ ಈ ತೀರ್ಥವನ್ನು ಗಂಗಾ, ಯಮುನಾ ಸರಸ್ವತಿಯ ಸ್ಮರಣೆ ಮಾಡುತ್ತ ನಾವು ಅದರ ಪ್ರಾಶನ ಮಾಡಬೇಕು. ಈ ಜಲವು ಗಂಗಾ, ಯಮುನಾ, ಸರಸ್ವತಿಯದ್ದೇ ಆಗಿದೆಯೆಂಬ ಭಾವವಿಡಬೇಕು. ಹಾಗೆಯೇ ನಮ್ಮ ಮೇಲೆ ಯಾರು ನಿಜವಾದ ಪ್ರೀತಿ ಮಾಡುವರು ಆ ಪ್ರತಿಯೊಬ್ಬರಿಗಾಗಿ ಕೂಡ ಈ ತೀರ್ಥವನ್ನು ಪ್ರಾಶನ ಮಾಡುತ್ತಿರುವೆಂಬ ಭಾವ ಇರಬೇಕು. ಆ ತೀರ್ಥವನ್ನು ತೆಗೆದುಕೊಂಡ ಮೇಲೆ ಅದೇ ಒದ್ದೆ ಕೈಯನ್ನು ಎರಡು ಕಣ್ಣು, ಆಜ್ನಾಚಕ್ರ ಹಾಗು ತಲೆಯ ಹಿಂದೆ ಅಂದರೆ Circle of Willis ನ ಸ್ಥಳದಲ್ಲಿ ಇಡಬೇಕು. ಈ ರೀತಿಯ ಅಭಿಷೇಕವನ್ನು ನಾವು ದಿನಂಪ್ರತಿ ಮಾಡಿದರೆ ಅದು ನಮಗಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಂತಾಗಿರುವದು.

ಇದರ ಚಿಹ್ನೆಯನ್ನು ತೆಗೆಯುವಾಗ ಅದರ ಮೇಲಿನ ಭಾಗದಲ್ಲಿ ಶ್ರೀಗಂಗಾ ತ್ರಿವೇಣಿ ಬರೆಯಬೇಕು. ಅದರ ಕೆಳಗೆ ಮಧ್ಯಭಾಗದಲ್ಲಿ algorithm ನ ಚಿಹ್ನೆಯನ್ನು ತೆಗೆಯಬೇಕು. ಚಿಹ್ನೆಯ ಕೆಳಗೆ ನಮ್ಮ ಮೆಚ್ಚಿನ ದೇವರ ಹೆಸರನ್ನು ಬರೆಯಬೇಕು. ಕಾಗದದಮೇಲೆ, ವಸ್ತ್ರದಮೇಲೆ ಬರೆದು ದೇವರಿಡುವ ಸ್ಥಳದ ಕೆಳಗೆ ಈ algorithm ನ್ನು ಇಟ್ಟರೆ ಬಹಳ ಶ್ರೇಯಸ್ಕರವಾಗಿರುವದು. ಒಂದು ವೇಳೆ ನಾವು ಈ ಪ್ರತಿಮೆಗೆ ಅರಶಿನ ಹಾಗು ಕುಂಕುಮವನ್ನು ಹಚ್ಚಲು ಮರೆತರೂ ನಡೆಯಬಹುದು. ಕೇವಲ ನಾವು ಎನು ಮಾಡುತ್ತೇವೆ ಅದನ್ನು ಬಹಳ ಪ್ರೀತಿಯಿಂದ ಮಾಡಬೇಕು. ಈ algorithm ನ ಪ್ರತಿಮೆಯನ್ನು ನಮ್ಮ ವಾಹನದಲ್ಲಿಟ್ಟರು ಕೂಡ ನಡೆಯಬಹುದು, ಯಾಕೆಂದರೆ ಹೀಗೆ ಮಾಡುವುದರಿಂದ ಈ ಪ್ರತಿಮೆಯ ಮೇಲೆ ಸೂರ್ಯಕಿರಣದ ಅಭಿಷೇಕವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯಕಿರಣದ ಅಭಿಷೇಕವನ್ನು ಬಹಳ ಪವಿತ್ರ ಹಾಗು ಸರ್ವೋತ್ತಮವೆಣಿಸಲಾಗುತ್ತದೆ. ಈ algorithm ನ್ನು ನಾವು ರಂಗೋಲಿಯಲ್ಲಿಯೂ ತೆಗೆಯಬಹುದು ಮತ್ತು ಇದರಲ್ಲಿ ಯಾವುದೇ ಬಣ್ಣವನ್ನು ಉಪಯೋಗಿಸಿದರೂ ಆಗಬಹುದು. ಈ ಗಂಗಾ-ತ್ರಿವೇಣಿಯ ಚಿಹ್ನೆಯನ್ನು ನಾವು ದೇವರನ್ನು ಯಾವ ವಸ್ತ್ರದ ಮೇಲೆ ಇಡುತ್ತೇವೆ ಆ ವಸ್ತ್ರದ ಕೆಳಗಿಟ್ಟರೆ ದೇವರಪೂಜೆ ಮಾಡುವ ಸಮಯದಲ್ಲಿ ನಮ್ಮ ಕೈಯಿಂದ ಯಾವುದೇ ಪ್ರಕಾರದ ತಪ್ಪಾದರೆ ಹೆದರುವ ಕಾರಣವಿಲ್ಲ.

Saturday, 19 October 2013

ಪರಮ ಪೂಜ್ಯ ಬಾಪೂರವರು ಕೊಟ್ಟ ೧೩ ಕಲಮಿನ (ನಿರ್ದಿಷ್ಟ) ಕಾರ್ಯಕ್ರಮಗಳು

ಹನ್ನೊಂದು ವರ್ಷಗಳ ಹಿಂದೆ ಅಂದರೆ ೩ ಅಕ್ಟೋಬರ್ ೨೦೦೨ರ ದಿನದಂದು, ಪರಮ ಪೂಜ್ಯ ಬಾಪೂರವರು ಹೃದಯ ಸ್ಪರ್ಷಿಸುವ ಹಾಗು ಪ್ರೇರಿಸುವ ಭಾಷಣವನ್ನು ಮಾಡಿದ್ದಾಗ ೧೩ ಕಲಮಿನ ಕಾರ್ಯಕ್ರಮಗಳನ್ನು ಕಲ್ಪಿಸಿದ್ದರು. ಈ ಕಾರ್ಯಕ್ರಮಗಳು ಇಂದಿಗೆ ಕಾರ್ಯರತವಾಗಿದ್ದು ಪರಮಪೂಜ್ಯ ಬಾಪೂರವರ ಮಾರ್ಗದರ್ಶನದಲ್ಲಿ ಸಫಲವಾಗಿ ನಡೆಯುತ್ತಿದ್ದು ಸಾವಿರಾರು ಶ್ರದ್ಧಾವಾನರು ಸ್ವಯಂ ಪ್ರೇರಿತರಾಗಿ ಪೂರ್ಣ ಶಕ್ತಿ ಹಾಗು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹನ್ನೊಂದು ವರ್ಷಗಳು ಕಳೆದರೂ ಅದರ ಮಹತ್ವ ಹೇತುಗರ್ಭಿತವಾಗಿ ಉಳಿದು ಮುಂದೆ ಬರುವ ವರ್ಷಗಳಲ್ಲಿ ಹಾಗೆಯೇ ಸಂಗತಮತವಾಗಿ ಮುಂದುವರಿಯಲ್ಲಿಕ್ಕಿದೆ.



ಆದ್ದರಿಂದ ಇವತ್ತಿನಿಂದ ಬಾಪೂರವರು ವಿವರಿಸಿದಂತೆ ಈ ಕಾರ್ಯಕ್ರಮದ ೧೩ ಕಲಮುಗಳು ಅಂತರ್ಭೂತವಾಗಿರುವ ಒಂದು ವಿಡಿಯೋ ಸಿರೀಜನ್ನು ನಾನು ಪ್ರಾರಂಭಿಸಲ್ಲಿದ್ದೇನೆ. ಇವತ್ತು ನಾನು ಈ ಪ್ರವಚನದ ಪೀಠಿಕೆಯನ್ನು ಪ್ರಸಿದ್ದ ಮಾಡಲಿದ್ದೇನೆ. ಮುಂದಕ್ಕೆ ನಾನು ಈ ಕಾರ್ಯಕ್ರಮದಲ್ಲಿದ್ದ ೧೩ ಕಲಮಿನ ಪ್ರತಿಯೊಂದು ಕಲಮಿನ ಬಗ್ಗೆ ಪ್ರದರ್ಶಿಸಲಿದ್ದೇನೆ.

Thursday, 26 September 2013

ವಿಶ್ವದ ರಹಸ್ಯ ತ್ರಿವಿಕ್ರಮ - π (Pi)

ಕಳೆದ ಹಲವು ವಾರಗಳಿಂದ ಪರಮಪೂಜ್ಯ ಬಾಪೂರವರ ಪ್ರವಚನಗಳು ಶ್ರೀ ಅನಿರುದ್ಧ ಗುರುಕ್ಷೇತ್ರಮ್ ಮಂತ್ರದಲ್ಲಿರುವ ಅಂಕುರಮಂತ್ರದ ಭಾಗದಲ್ಲಿಯ ಮೂರನೇ ಪದವಾದ  "ಓಂ" ರಾಮವರದಾಯಿನಿ ಶ್ರೀಮಹಿಷಾಸುರಮರ್ದಿನೈ ನಮ: |" ದ ಮೇಲೆ ಆಗುತ್ತಿದೆ.


ಈ ಪ್ರವಚನದಲ್ಲಿ ಬಾಪೂರವರು ನಮಗೆ ಪರಮೇಶ್ವರಿ ಸೂತ್ರ  (algorithms) ಹಾಗು ಶುಭಚಿಹ್ನೆಗಳ ಪರಿಚಯವನ್ನು ಮಾಡಿಕೊಟ್ಟರು. ಈ ಸೂತ್ರದ ಮೂಲಕ ಬಾಪೂರವರು ನಮಗೆ ಸ್ಕಂದಚಿಹ್ನೆ, ಸ್ವಸ್ತಿಕ, ಸೃಷ್ಟಿಯ ಸೂರ್ಯ ಹಾಗು ಚಂದ್ರ, ದೀಪ, ಆರತಿಯಂತಹ ಅನೇಕ algorithms ಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ಹೇಳಿದರು.

ಅದರನಂತರ ಜುಲೈ ತಿಂಗಳಿನಲ್ಲಿ ಬಾಪೂರವರು  ಪ್ರವಚನವನ್ನು ಆರಂಭ ಮಾಡುವ ಮೊದಲು ನಮಗೆ ಹೇಳಿದ್ದರು, "ಇವತ್ತು ನಮಗೆ ವಿಶ್ವದ ಬಹಳ ದೊಡ್ಡ ರಹಸ್ಯವನ್ನು ನೋಡಬೇಕಾಗಿದೆ" ಮತ್ತು ಈ ಪ್ರವಚನದಲ್ಲಿ ಬಾಪೂರವರು ಪ್ರಶ್ನೆ ಕೇಳಿದ್ದರು, ಗಣಿತದಲ್ಲಿರುವ Pi (π) constant (ಸ್ಥಿರಾಂಕ) ಹೇಗೆ ನಿರ್ಮಾಣವಾಯಿತು? ಮತ್ತು ಅದರ ಉತ್ತರ ಕೊಡುವಾಗ ತಿಳಿಸಿ ಹೇಳಿದರು, Pi (π) ಈ ಸ್ಥಿರಾಂಕ ಸೃಷ್ಟಿಯಲ್ಲಿ ಎಂದೂ ಬದಲಾಯಿಸುವುದಿಲ್ಲ ಹಾಗೆಯೇ ಈ ಸ್ಥಿರಾಂಕವೆಂದರೆ ವರ್ತುಳದ ಪರೀಘ ಭಾಗಿಲೆ ವ್ಯಾಸ. ಇದನ್ನು ಹೇಳುವಾಗ ಹನುಮಂತನೊಡನೆ ಇದರ ಸಂಬಂಧ ಹೇಗಿದೆ, ಹನುಮಂತನ ಈ ವರ್ತುಳದ ಸಂಬಂಧ ಹೇಗಾಗಿರುವುದನ್ನು ವಿವರಿಸುವಾಗ ಶ್ರೀಮಾರುತಿ ಸ್ತ್ರೋತ್ರದ" ಬ್ರಹ್ಮಾಂಡಭೋವತೆ ವೇಢೆ ವಜ್ರ ಪುಚ್ಛೆ ಕರು ಶಕೆ " ಈ ಸಾಲಿನ ಉಲ್ಲೇಖ ಮಾಡಿ ತಿಳಿಸಿದರು.  ಅದರ ನಂತರ ಈ ವರ್ತುಳಾಕೃತಿಯಾದ ಬ್ರಹ್ಮಾಂಡಕ್ಕೆ ಹನುಮಂತನ ಬೀಲದ ಸುತ್ತು ಹೇಗೆ ಚಿರಕಾಲದತನಕ ಇರುವುದನ್ನು ಕೂಡ ಬಾಪೂ ಸ್ಪಷ್ಟ ಮಾಡಿದರು.

ಹಿಂದೆ ಮಾಡಿರುವ ಪ್ರವಚನದಲ್ಲಿ ಅಂದರೆ ೮ ಆಗಷ್ಟ್ ೨೦೧೩ ರ ಪ್ರವಚನದಲ್ಲಿ ಬಾಪೂರವರು Pi (π) ಸ್ಥಿರಾಂಕದ ಮುನ್ನೂರ ಅರವತ್ತು ದಶಾಂಶದ ತನಕ ಬೆಲೆಯನ್ನು ತೋರಿಸಿಕೊಟ್ಟರು. ಈ ಬೆಲೆಯನ್ನು ಐದು-ಐದರ ಭಾಗ (set) ದಲ್ಲಿ ತೋರಿಸಿ ಅದು ಐದು-ಐದರ ಸೆಟ್ಟಿನಲ್ಲಿ ಯಾಕಿರುವುದನ್ನು ವಿಶದ ಮಾಡಿದರು.

ಆದರೆ ಅನೇಕರ ತಪ್ಪು ಕಲ್ಪನೆಯಿರುವುದೇನೆಂದರೆ ೨೨/೭ ಇದು Pi (π)  ಅದರ ಸರಿಯಾದ ಬೆಲೆ (exact value) ಆಗಿರುವದು. ಆದರೆ ಅದು ಹಾಗಿರದೆ  Pi (π) ಒಂದು ಸ್ಥಿರಾಂಕವಾಗಿದೆ. ’Pi or Π is an irrational number, which means that it cannot be expressed exactly as a ratio of any two integers. Fractions such as 22/7 are commonly used as an approximation of Π; no fraction can be its exact value.’ ಗಣಿತಜ್ನರು ಇಷ್ಟರವರೆಗೆ ದಶಾಂಶ ಚಿಹ್ನೆಯ ಮುಂದೆ ಐದು ದಶಲಕ್ಷ ಅಂಕೆಯ ತನಕ Pi (π) ಅದರ ಬೆಲೆಯನ್ನು ಕಂಡುಹಿಡಿದಿದ್ದಾರೆ.

ಭಾರತೀಯ ಅಧ್ಯಾತ್ಮ ಶಾಸ್ತ್ರದಲ್ಲಿ  Pi (π) ಈ ಸಂಜ್ನೆಯನ್ನು ತ್ರಿಪುರಾರಿ ತ್ರಿವಿಕ್ರಮ ಚಿಹ್ನೆಯಿಂದ ತೋರಿಸಲಾಗುತ್ತಿದೆ ಎಂದು ಬಾಪೂರವರು ವಿಶದ ಮಾಡಿದರು. ಇದನ್ನು ಹೇಳುವಾಗ ಬಾಪೂರವರು ಮುಂದೆ ಹೇಳಿದರು, "ಈ ಬ್ರಹ್ಮಾಂಡದ ಅಂದರೆ ಆದೀಮಾತೆಯು ನಿರ್ಮಾಣ ಮಾಡಿರುವ ವಿಶ್ವದ ವಿಸ್ತಾರವು ಸಂತುಲಿತವಾಗಿದೆ. ಅದರ ಮಿತಿ ಅಂದರೆ (ಲಿಮಿಟ್) ಹನುಮಂತನಾಗಿರುವನು. ಆದ್ದರಿಂದಲೇ ಅವನು ಪ್ರಥಮಪುತ್ರ (ದತ್ತಾತ್ರೇಯ ಸ್ವರೂಪ ಶುಭಪ್ರಕಾಶ) ನಾಗಿರುವನು. ಮತ್ತು ಈ ಬ್ರಹ್ಮಾಂಡದ ವ್ಯಾಸವು ಈ ತ್ರಿವಿಕ್ರಮ (ಹರಿಹರ) ಅಂದರೆ ಮಹಾವಿಷ್ನು ಮತ್ತು ಪರಮಶಿವ ಏಕತ್ರಿತವಾಗಿರುವದು; ಶ್ರೀರಾಮ ಮತ್ತು ಹನುಮಂತ ಏಕತ್ರಿತ; ಶೌರ್ಯ ಹಾಗು ಕ್ಷಮೆ ಏಕತ್ರಿತವಾಗಿರುವಂತೆ ಇರುವದು.

೨೨/೭ ಈ ಗಣಿತಸಂಖ್ಯೆಯು  Pi (π) ನ approximation ಅಂದರೆ ಅಂದಾಜು ಹಾಕಿದ ಬೆಲೆಯಾಗಿರುವದು ಅಂದರೆ ಭೌತಿಕ ಜಗತ್ತಿನ ಸಾಮಾನ್ಯ ಗಣಿತದಲ್ಲಿ ಅದನ್ನು ಈ ಪದ್ಧತಿಯಲ್ಲಿ ಉಪಯೋಗ ಮಾಡಲಾಗುವದು.

ಬಾಪೂರವರು ಹೇಳಿದ ಪ್ರಕಾರ ತ್ರಿವಿಕ್ರಮವು ಅನಂತನಾಗಿರುವುದರಿಂದ Pi (π) ಗಣಿತಸಂಜ್ನೆಯ exact ಬೆಲೆಯನ್ನು ತೆಗೆಯಲು ಅಸಾಧ್ಯವಾಗಿದೆ.